ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಿ ಕಾರಿನತ್ತ ಬರುತ್ತಿರುವ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿನ್ನು ತಡೆದ ಬದನಗುಪ್ಪೆಯ ಗೋವಿಂದ ಹಾಗೂ ಕಾಳ ನಾಯಕ ಅವರು, ‘ಕೈಗಾರಿಕಾ ಪ್ರದೇಶಕ್ಕಾಗಿ ಮೂರು ಎಕರೆ ಜಮೀನು ನೀಡಿದ್ದೇವೆ. ಪರಿಹಾರ ಸ್ವಲ್ಪ ಸಿಕ್ಕಿದೆ. ಬಾಕಿ ಇನ್ನೂ ಸಿಕ್ಕಿಲ್ಲ. ಐದು ವರ್ಷಗಳಿಂದ ಅಧಿಕಾರಿಗಳು ನೆಪಗಳನ್ನು ಹೇಳಿಕೊಂಡು ಮುಂದೂಡುತ್ತಲೇ ಇದ್ದಾರೆ’ ಎಂದು ದೂರಿದರು.