<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ದಿನವಿಡಿ ಆರ್ದ್ರ ಮಳೆಯ ಸಿಂಚನಕ್ಕೆ ಮೈಮನ ಮುದುಡಿತು. ಸುಳಿಗಾಳಿ, ಬಿಳಿಮೋಡ ಬೆಟ್ಟದ ಸೆರಗನ್ನು ಮುಚ್ಚಿ ಬೆಳ್ನೊರೆ ಮಂಜು ಆವರಿಸಿತ್ತು. ಗಾಳಿಯ ವೇಗದ ಜೊತೆ ಮೇಘಗಳ ಸಾಲು ಬೆಟ್ಟ ಗುಡ್ಡಗಳನ್ನು ಆವರಿಸಿ, ಜನ ಜೀವನವನ್ನು ದಿನವಿಡೀ ಕಾಡಿತು.</p>.<p>ಬೆಟ್ಟದ ಸುತ್ತಮುತ್ತ ಎರಡು ದಿನಗಳಿಂದ ತುಂತುರು ಹನಿ ಚಲ್ಲಾಟ ಮುಂದುವರಿದಿದೆ. ದೇವಳ ಸುತ್ತಮುತ್ತ ಮಳೆ, ಮಂಜು ಆವರಿಸಿದ್ದು, ಭಕ್ತರು ತುಂತುರು ನಡುವೆ ದೇವರ ದರ್ಶನ ಪಡೆದರು.</p>.<p>ತರಗುಟ್ಟುವ ಚಳಿ, ಕುಳಿರ್ಗಾಳಿ ಸ್ಥಳೀಯರನ್ನು ಮನೆಯಿಂದ ಹೊರ ಬರದಂತೆ ತಡೆಯಿತು. ಬೆರಳೆಣಿಕೆಯ ಪ್ರವಾಸಿಗರು ಚಳಿಯಿಂದ ರಕ್ಷಿಸಿಕೊಳ್ಳಲು ಪರದಾಡಿದರು.</p>.<p>‘ಕಾಡಂಚಿನ ಪ್ರದೇಶಗಳಲ್ಲಿ ಮುಂಜಾನೆಯಿಂದ ಮೋಡ ಮುಚ್ಚಿದ ವಾತಾವರಣ ಕಂಡುಬಂದಿದೆ. ಒಂದೆರಡು ಬಾರಿ ಹನಿ ಕಾಣಿಸಿಕೊಂಡಿದೆ. ಆದರೆ, ಭೂಮಿ ಹದಕ್ಕೆ ಬೇಕಾದ ಮಳೆ ಸುರಿದಿಲ್ಲ. ಬದಲಾದ ಹವಾಮಾನದಿಂದ ಚಳಿ, ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದೆ’ ಎಂದು ಮಲಾರಪಾಳ್ಯ ಪ್ರದೀಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ದಿನವಿಡಿ ಆರ್ದ್ರ ಮಳೆಯ ಸಿಂಚನಕ್ಕೆ ಮೈಮನ ಮುದುಡಿತು. ಸುಳಿಗಾಳಿ, ಬಿಳಿಮೋಡ ಬೆಟ್ಟದ ಸೆರಗನ್ನು ಮುಚ್ಚಿ ಬೆಳ್ನೊರೆ ಮಂಜು ಆವರಿಸಿತ್ತು. ಗಾಳಿಯ ವೇಗದ ಜೊತೆ ಮೇಘಗಳ ಸಾಲು ಬೆಟ್ಟ ಗುಡ್ಡಗಳನ್ನು ಆವರಿಸಿ, ಜನ ಜೀವನವನ್ನು ದಿನವಿಡೀ ಕಾಡಿತು.</p>.<p>ಬೆಟ್ಟದ ಸುತ್ತಮುತ್ತ ಎರಡು ದಿನಗಳಿಂದ ತುಂತುರು ಹನಿ ಚಲ್ಲಾಟ ಮುಂದುವರಿದಿದೆ. ದೇವಳ ಸುತ್ತಮುತ್ತ ಮಳೆ, ಮಂಜು ಆವರಿಸಿದ್ದು, ಭಕ್ತರು ತುಂತುರು ನಡುವೆ ದೇವರ ದರ್ಶನ ಪಡೆದರು.</p>.<p>ತರಗುಟ್ಟುವ ಚಳಿ, ಕುಳಿರ್ಗಾಳಿ ಸ್ಥಳೀಯರನ್ನು ಮನೆಯಿಂದ ಹೊರ ಬರದಂತೆ ತಡೆಯಿತು. ಬೆರಳೆಣಿಕೆಯ ಪ್ರವಾಸಿಗರು ಚಳಿಯಿಂದ ರಕ್ಷಿಸಿಕೊಳ್ಳಲು ಪರದಾಡಿದರು.</p>.<p>‘ಕಾಡಂಚಿನ ಪ್ರದೇಶಗಳಲ್ಲಿ ಮುಂಜಾನೆಯಿಂದ ಮೋಡ ಮುಚ್ಚಿದ ವಾತಾವರಣ ಕಂಡುಬಂದಿದೆ. ಒಂದೆರಡು ಬಾರಿ ಹನಿ ಕಾಣಿಸಿಕೊಂಡಿದೆ. ಆದರೆ, ಭೂಮಿ ಹದಕ್ಕೆ ಬೇಕಾದ ಮಳೆ ಸುರಿದಿಲ್ಲ. ಬದಲಾದ ಹವಾಮಾನದಿಂದ ಚಳಿ, ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದೆ’ ಎಂದು ಮಲಾರಪಾಳ್ಯ ಪ್ರದೀಪ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>