ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಪೃಥ್ವಿ ಅವರು, ‘ಚಂದ್ರಶೇಖರ್ ಅವರು ಹಸಿರು ಟವೆಲ್ ಹಾಕಿಕೊಂಡು ದಂಧೆ ಮಾಡುತ್ತಿದ್ದಾರೆ ಎಂದು ಮಲ್ಲೇಶ್ ಆರೋಪಿಸಿದ್ದಾರೆ. ಆದರೆ, ಹಸಿರು ಟವೆಲ್ ಹಾಕಿಕೊಂಡು, ಅವರನ್ನು ನಂಬಿದ್ದ ನೂರಾರು ರೈತರನ್ನು ಅರ್ಧದಲ್ಲೇ ಬಿಟ್ಟು ರಾಜಕೀಯ ಸೇರಿ ದಂಧೆ ನಡೆಸುತ್ತಿರುವವರು ಮಲ್ಲೇಶ್. ಈಗ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಚಮಚಾಗಿರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.