‘ಸಂರಕ್ಷಿತ ಪ್ರದೇಶದ ಪುಣಜನೂರು, ಬೂದಿಪಡಗ, ಬೇಡಗುಳಿ, ನಲ್ಲೂರು ಹಾಗೂ ಬಿಳಿರಂಗನಬೆಟ್ಟದ ವ್ಯಾಪ್ತಿಯ ಅರಣ್ಯದಲ್ಲಿ ಹರಿಯುತ್ತಿರುವ ನದಿ, ತೊರೆಗಳ ಪಕ್ಕದಲ್ಲಿ ಬಿದಿರು ಮೆಳೆಗಳು ಭಾರಿ ಪ್ರಮಾಣದಲ್ಲಿವೆ. ಆನೆಗಳಿಗೆ ಇವು ಉತ್ತಮವಾದ ಆಹಾರವಾಗುತ್ತಿತ್ತು. ಆದರೆ, ಈಗ ಬಹುತೇಕ ಎಲ್ಲ ಕಡೆಗಳಲ್ಲಿ ಬಿದಿರು ಹೂಬಿಟ್ಟು, ಭತ್ತ ಬರಲು ಆರಂಭವಾಗಿದ್ದು ಒಣಗುತ್ತಿವೆ. ಹಲವರು ಈ ಬಿದಿರು ಭತ್ತವನ್ನು ಸಂಗ್ರಹಿಸಿ ಹೊರಗಡೆ ಮಾರಾಟ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.