<p><strong>ಮಹದೇಶ್ವರ ಬೆಟ್ಟ</strong>: ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಇಲ್ಲಿನ ಮಲೆಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಪುನಸ್ಕಾರ, ಶತಕುಂಭಾಭಿಷೇಕ ನೆರವೇರಿತು.</p>.<p>ಕೋವಿಡ್ ಕಾರಣಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಬೇಡಗಂಪಣ ಸಮುದಾಯದ ವಿಧಿವಿಧಾನಗಳ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಬೇಡಗಂಪಣ ಜನಾಂಗದ ಮಕ್ಕಳು ಉಪವಾಸದಿಂದಿದ್ದು, ಮಜ್ಜನ ಬಾವಿಯಿಂದ 108 ಬಿಂದಿಗೆಗಳಲ್ಲಿ ನೀರು ಮತ್ತು 108 ಎಳನೀರನ್ನು ವಿಧಿ ವಿಧಾನದಂತೆ ವೇದ ಮಂತ್ರ ಘೋಷಣೆಗಳ ನಡುವೆ ಪೂಜೆ ಮಾಡಿ ಮಂಗಳವಾಧ್ಯಗಳ ಸಮೇತವಾಗಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.</p>.<p>ದೇವಾಲಯದ ಒಳಭಾಗದಲ್ಲಿ ಪ್ರದಕ್ಷಿಣೆ ಮಾಡಿ ಗರ್ಭಗುಡಿ ಪಕ್ಕದಲ್ಲಿರುವ ಮಂಟಪದಲ್ಲಿ ಬಾಳೆ ಎಲೆಯಲ್ಲಿ ಹಾಕಲಾಗಿದ್ದ ಅಕ್ಕಿಯ ಮೇಲೆ ಎಳನೀರು ಮತ್ತು ಜಲವನ್ನು ತುಂಬಿದ ಬಿಂದಿಗೆಗಳನ್ನು ಇಡಲಾಯಿತು.</p>.<p>ಸಾಲೂರು ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಕಳಶಗಳಿಗೆ ಪೂಜೆ ಸಲ್ಲಿಸಿ, ನಂತರ ಮಲೆ ಮಹದೇಶ್ವರ ಸ್ವಾಮಿಗೆ ಅಭಿಷೇಕವನ್ನು ಮಾಡಲಾಯಿತು.</p>.<p class="Subhead">ವಿಶೇಷ ಅಲಂಕಾರ: ಶ್ರಾವಣ ಮಾಸದ ಮೊದಲ ದಿನ ನಡೆಯುವ ವಿಶೇಷ ಶತಕುಂಭಾಭಿಷೇಕ್ಕಾಗಿ ಇಡೀ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.</p>.<p class="Subhead">ಮ.3ರ ನಂತರ ಅವಕಾಶ: ಸಾಮಾನ್ಯವಾಗಿ ಆಷಾಢ ಮಾಸದ ಕೊನೆಯ ದಿನ ಅಂದರೆ ಭೀಮನ ಅಮಾವಾಸ್ಯೆಯಂದು ಹಾಗೂ ಶ್ರಾವಣ ಮಾಸದ ಮೊದಲ ದಿನ ಪ್ರತಿ ವರ್ಷ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ.</p>.<p>ಈ ಬಾರಿ ಕೋವಿಡ್ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸೋಮವಾರಮಧ್ಯಾಹ್ನದವರೆಗೂ ಈ ಧಾರ್ಮಿಕ ಕಾರ್ಯಕ್ರಮಗಳು ಇದ್ದುದರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮೂರು ಗಂಟೆಯ ನಂತರ ಎಂದಿನಂತೆ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ</strong>: ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಇಲ್ಲಿನ ಮಲೆಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಪುನಸ್ಕಾರ, ಶತಕುಂಭಾಭಿಷೇಕ ನೆರವೇರಿತು.</p>.<p>ಕೋವಿಡ್ ಕಾರಣಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಬೇಡಗಂಪಣ ಸಮುದಾಯದ ವಿಧಿವಿಧಾನಗಳ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಬೇಡಗಂಪಣ ಜನಾಂಗದ ಮಕ್ಕಳು ಉಪವಾಸದಿಂದಿದ್ದು, ಮಜ್ಜನ ಬಾವಿಯಿಂದ 108 ಬಿಂದಿಗೆಗಳಲ್ಲಿ ನೀರು ಮತ್ತು 108 ಎಳನೀರನ್ನು ವಿಧಿ ವಿಧಾನದಂತೆ ವೇದ ಮಂತ್ರ ಘೋಷಣೆಗಳ ನಡುವೆ ಪೂಜೆ ಮಾಡಿ ಮಂಗಳವಾಧ್ಯಗಳ ಸಮೇತವಾಗಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.</p>.<p>ದೇವಾಲಯದ ಒಳಭಾಗದಲ್ಲಿ ಪ್ರದಕ್ಷಿಣೆ ಮಾಡಿ ಗರ್ಭಗುಡಿ ಪಕ್ಕದಲ್ಲಿರುವ ಮಂಟಪದಲ್ಲಿ ಬಾಳೆ ಎಲೆಯಲ್ಲಿ ಹಾಕಲಾಗಿದ್ದ ಅಕ್ಕಿಯ ಮೇಲೆ ಎಳನೀರು ಮತ್ತು ಜಲವನ್ನು ತುಂಬಿದ ಬಿಂದಿಗೆಗಳನ್ನು ಇಡಲಾಯಿತು.</p>.<p>ಸಾಲೂರು ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಕಳಶಗಳಿಗೆ ಪೂಜೆ ಸಲ್ಲಿಸಿ, ನಂತರ ಮಲೆ ಮಹದೇಶ್ವರ ಸ್ವಾಮಿಗೆ ಅಭಿಷೇಕವನ್ನು ಮಾಡಲಾಯಿತು.</p>.<p class="Subhead">ವಿಶೇಷ ಅಲಂಕಾರ: ಶ್ರಾವಣ ಮಾಸದ ಮೊದಲ ದಿನ ನಡೆಯುವ ವಿಶೇಷ ಶತಕುಂಭಾಭಿಷೇಕ್ಕಾಗಿ ಇಡೀ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.</p>.<p class="Subhead">ಮ.3ರ ನಂತರ ಅವಕಾಶ: ಸಾಮಾನ್ಯವಾಗಿ ಆಷಾಢ ಮಾಸದ ಕೊನೆಯ ದಿನ ಅಂದರೆ ಭೀಮನ ಅಮಾವಾಸ್ಯೆಯಂದು ಹಾಗೂ ಶ್ರಾವಣ ಮಾಸದ ಮೊದಲ ದಿನ ಪ್ರತಿ ವರ್ಷ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ.</p>.<p>ಈ ಬಾರಿ ಕೋವಿಡ್ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸೋಮವಾರಮಧ್ಯಾಹ್ನದವರೆಗೂ ಈ ಧಾರ್ಮಿಕ ಕಾರ್ಯಕ್ರಮಗಳು ಇದ್ದುದರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮೂರು ಗಂಟೆಯ ನಂತರ ಎಂದಿನಂತೆ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>