ದಿಗ್ಬಂಧನದ ಕಾರಣಕ್ಕೆ ಮಂಗಳೂರಿನಿಂದ 20ಕ್ಕೂ ಹೆಚ್ಚು ಟೆಂಪೊ ಟ್ರಾವೆಲರ್ ಹಾಗೂ ಮಿನಿಬಸ್ಗಳಲ್ಲಿ ಬಂದಿದ್ದ ಮೀನುಗಾರರು ಪುಣಜನೂರು ಚೆಕ್ಪೋಸ್ಟ್ ದಾಟಿ ಹೋದರು. ತಮಿಳುನಾಡಿನ ಹಸನೂರು ಚೆಕ್ಪೋಸ್ಟ್ ಬಳಿ ಅವರನ್ನು ಇಳಿಸಿದ ವಾಹನಗಳು ಹಿಂದಿರುಗಿದವು. ತಮಿಳುನಾಡಿನ ಸಿಬ್ಬಂದಿ ಅವರನ್ನು ಅಲ್ಲಿ ತಡೆದರು. ಇದರಿಂದ ಗೊಂದಲ ಉಂಟಾಯಿತು. ನಂತರ ಜಿಲ್ಲೆಯ ಪೊಲೀಸರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿದರು.