<p><strong>ಗುಂಡ್ಲುಪೇಟೆ:</strong> ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಸಮೀಪ ಕರಿಕಲ್ಲ ಮುಂಟಿ ಬಳಿ ಹುಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿದೆ.</p>.<p>ಶನಿವಾರ ಸಂಜೆ ಘಟನೆ ನಡೆದಿದೆ. ಹುಲಿ ದೇಹದ ಕೆಲ ಭಾಗಗಳನ್ನು ಬಗೆದಿದ್ದು, ಒಂದು ಕಾಲನ್ನು ತಿಂದಿದೆ.</p>.<p>ಚೌಡಹಳ್ಲಿ ಗ್ರಾಮದ ಶಿವಮಾದಯ್ಯ(55) ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಎತ್ತುಗಳನ್ನು ಮೇಯಿಸುವಾಗ ದಾಳಿ ಮಾಡಿ, ಸುಮಾರು ಒಂದು ಕಿ.ಮೀ. ದೂರ ಬೆಟ್ಟಕ್ಕೆ ಎಳೆದೊಯ್ದಿದೆ.</p>.<p>ದಾಳಿ ಮಾಡಿದ ಸ್ಥಳದಲ್ಲಿ ಟವೆಲ್, ಚಪ್ಪಲಿ ಬಿದ್ದಿದೆವೆ. ಎಳೆದೊಯ್ದ ಜಾಡನ್ನು ಹಿಡಿದು ಹುಡುಕಿ ಮೃತ ದೇಹವನ್ನು ಪತ್ತೆ ಮಾಡಲಾಗಿದೆ.</p>.<p><strong>ಬಾರದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ</strong></p>.<p>ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಾರದಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹುಲಿಗೇನಾದರು ಆದರೆ ತಕ್ಷಣ ಸ್ಥಳಕ್ಕೆ ಬರುವ ಅಧಿಕಾರಿಗಳು ಜನ ಸತ್ತಾಗ ಏಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಸಮೀಪ ಕರಿಕಲ್ಲ ಮುಂಟಿ ಬಳಿ ಹುಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿದೆ.</p>.<p>ಶನಿವಾರ ಸಂಜೆ ಘಟನೆ ನಡೆದಿದೆ. ಹುಲಿ ದೇಹದ ಕೆಲ ಭಾಗಗಳನ್ನು ಬಗೆದಿದ್ದು, ಒಂದು ಕಾಲನ್ನು ತಿಂದಿದೆ.</p>.<p>ಚೌಡಹಳ್ಲಿ ಗ್ರಾಮದ ಶಿವಮಾದಯ್ಯ(55) ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಎತ್ತುಗಳನ್ನು ಮೇಯಿಸುವಾಗ ದಾಳಿ ಮಾಡಿ, ಸುಮಾರು ಒಂದು ಕಿ.ಮೀ. ದೂರ ಬೆಟ್ಟಕ್ಕೆ ಎಳೆದೊಯ್ದಿದೆ.</p>.<p>ದಾಳಿ ಮಾಡಿದ ಸ್ಥಳದಲ್ಲಿ ಟವೆಲ್, ಚಪ್ಪಲಿ ಬಿದ್ದಿದೆವೆ. ಎಳೆದೊಯ್ದ ಜಾಡನ್ನು ಹಿಡಿದು ಹುಡುಕಿ ಮೃತ ದೇಹವನ್ನು ಪತ್ತೆ ಮಾಡಲಾಗಿದೆ.</p>.<p><strong>ಬಾರದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ</strong></p>.<p>ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಾರದಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹುಲಿಗೇನಾದರು ಆದರೆ ತಕ್ಷಣ ಸ್ಥಳಕ್ಕೆ ಬರುವ ಅಧಿಕಾರಿಗಳು ಜನ ಸತ್ತಾಗ ಏಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>