ಘಟನೆಯಿಂದ ಈ ಭಾಗದ ರೈತರು ಬೆಚ್ಚಿ ಬಿದ್ದಿದ್ದಾರೆ. ಜಾನುವಾರುಗಳನ್ನು ಸೂಕ್ತ ರಕ್ಷಣೆ ಇಲ್ಲದೆ ಕೊಟ್ಟಿಗೆ ಅಥವಾ ಹೊರ ಆವರಣದಲ್ಲಿ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ‘ಜಾನುವಾರುಗಳನ್ನು ಮೇಯಲು ಬಿಡುವಾಗ ಮತ್ತು ಮನೆಗೆ ಕರೆತರುವಾಗ ಗುಂಪಿನಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಮಂದಿ ಹೋಗಿಬರಬೇಕಿದೆ. ಜಾನುವಾರುಗಳಲ್ಲದೇ ಮನುಷ್ಯರ ಮೇಲೆ ದಾಳಿ ನಡೆಸಿದರೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಆದ್ದರಿಂದ ಹುಲಿ ಸೆರೆಗೆ ಇನ್ನೂ ಹೆಚ್ಚಿನ ಕ್ರ್ರಮಗಳನ್ನು ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.