ಯಡಿಯೂರಪ್ಪ ಹಾಗೂ ಸೋಮಣ್ಣ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಕಾರಣಕ್ಕೆ ಸಚಿವರು ಬಂದಿಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಇಬ್ಬರ ನಡುವೆ ಮುಸುಕು ಇಲ್ಲ ಗುದ್ದಾಟವೂ ಇಲ್ಲ. ನಾನೂ ಕೂಡ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗಲು ಆಗಿಲ್ಲ. ಅಂದ ಮಾತ್ರಕ್ಕೆ ನನಗೂ ಯಡಿಯೂರಪ್ಪ ನಡುವೆ ಗುದ್ದಾಟ ಎಂದೆ ಎಂದರ್ಥವೇ' ಎಂದು ಪ್ರಶ್ನಿಸಿದರು.