<p><strong>ಚಾಮರಾಜನಗರ:</strong> ಚಳಿರಾಯ ನಿಧಾನವಾಗಿ ಗಡಿ ಜಿಲ್ಲೆಗೆ ಕಾಲಿಟ್ಟಿದ್ದಾನೆ. ವಾರದಿಂದೀಚೆಗೆ ಇಳಿ ಸಂಜೆಯಿಂದ ಬೆಳಗ್ಗಿನವರೆಗೆ ಶೀತ ವಾತಾವರಣ ಕಂಡು ಬರುತ್ತಿದ್ದು, ಉಷ್ಣಾಂಶ ದಿನೇ ದಿನೇ ಕುಸಿಯಲು ಆರಂಭಿಸಿದೆ.</p>.<p>ಕಳೆದ ವಾರದವರೆಗೂ 21–20 ಡಿಗ್ರಿ ಸೆಲ್ಸಿಯಸ್ನ ಆಸುಪಾಸಿನಲ್ಲಿದ್ದ ಕನಿಷ್ಠ ಉಷ್ಣಾಂಶ ಎರಡು ದಿನಗಳಿಂದ 17–16 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಗರಿಷ್ಠ ಉಷ್ಣಾಂಶ 27–28 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗುತ್ತಿದೆ.</p>.<p>ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ, ಜಿಲ್ಲಾ ಕೇಂದ್ರ ಚಾಮರಾಜನಗರದ ಮಂದಿಗೆ ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಚಳಿಯ ಅನುಭವವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೂ ಶೀತ ವಾತಾವರಣ ಇತ್ತು. ಸೂರ್ಯನ ಕಿರಣಗಳು ಸರಿಯಾಗಿ ಭೂಮಿಗೆ ಬಿದ್ದ ನಂತರವಷ್ಟೇ ವಾತಾವರಣ ಸ್ವಲ್ಪ ಬಿಸಿಯಾಯಿತು.</p>.<p class="Subhead"><strong>ವಿಳಂಬ:</strong> ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಚ ಚಳಿಗಾಲ ಆರಂಭ ಸ್ವಲ್ಪ ನಿಧಾನವಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರವೇ ಚಳಿ ಆರಂಭವಾಗಿತ್ತು. ನಾಲ್ಕೈದು ದಿನಗಳ ಕಾಲ ಕೊರೆಯುವ ಚಳಿ ಇದ್ದು, ನಂತರ ಕಡಿಮೆಯಾಗಿ, ನವೆಂಬರ್ ಎರಡನೇ ವಾರದಿಂದ ಮತ್ತೆ ಥರಗುಟ್ಟುವ ಚಳಿ ಶುರುವಾಗಿತ್ತು.</p>.<p>ಈ ಬಾರಿ ನವೆಂಬರ್ ಆರಂಭದವರೆಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದುದರಿಂದ ಚಳಿ ಆರಂಭ ಕೊಂಚ ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ.</p>.<p class="Subhead"><strong>ದೂರವಾದ ಮಳೆ:</strong> ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಜಿಲ್ಲೆಯಲ್ಲೂ ಕಳೆದ ವಾರದ ಮಧ್ಯದಲ್ಲಿ ಎರಡು ದಿನ ಮಳೆಯಾಗಿತ್ತು. ಆ ಬಳಿಕ ಎಲ್ಲೂ ಮಳೆ ಬಿದ್ದಿಲ್ಲ. ಇಬ್ಬನಿ ಹಾಗೂ ಮಂಜಿನ ಅಬ್ಬರ ಹೆಚ್ಚಾಗಿದೆ.</p>.<p>ಕೆರೆ ಕಟ್ಟೆಗಳು, ಅರಣ್ಯದ ಅಂಚು, ಕೃಷಿ ಜಮೀನಿನಲ್ಲಿ ಆವರಿಸುವ ಇಬ್ಬನಿ, ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತಿವೆ.</p>.<p>ಎರಡು ದಿನಗಳಿಂದ ಸಂಜೆ 5.30ರ ನಂತರ ಶೀತಗಾಳಿ ಬೀಸಲು ಆರಂಭಿಸುತ್ತಿದೆ. ಬೆಳಗಿನ ಜಾವ ಶೀತ ಹೆಚ್ಚಾಗಿದ್ದು, ಮಂಜಿನ ವಾತಾವರಣ ಕಂಡು ಬರುತ್ತಿದೆ.</p>.<p class="Subhead"><strong>ಜನಜೀವನದ ಮೇಲೆ ಪರಿಣಾಮ:</strong> ಚಳಿ ಹೆಚ್ಚಾಗುತ್ತಿದ್ದಂತೆಯೇ ಜನರ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಬೆಳಿಗ್ಗೆ ಬೇಗ ವಾಯುವಿಹಾರಕ್ಕೆ ತೆರಳುತ್ತಿದ್ದವರು ಸ್ವಲ್ಪ ತಡವಾಗಿ ಹೋಗುತ್ತಿದ್ದಾರೆ.</p>.<p>ಸ್ವೆಟರ್, ಜಾಕೆಟ್, ಟೊಪ್ಪಿ, ಮಫ್ಲರ್ಗಳನ್ನು ಸಾರ್ವಜನಿಕರು, ಮಕ್ಕಳು, ವಿದ್ಯಾರ್ಥಿಗಳು ಧರಿಸುತ್ತಿದ್ದಾರೆ. ಸೋಲಾರ್ ಹೀಟರ್ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಜನರು ಬಿಸಿನೀರು ಕಾಯಿಸುವುದಕ್ಕಾಗಿ ಒಲೆಯ ಮೊರೆ ಹೋಗಿದ್ದಾರೆ. ಹಾಗಾಗಿ, ತೆಂಗಿನ ಕಾಯಿ ಸಿಪ್ಪೆಗಳಿಗೆ (ಮಟ್ಟೆ) ಬೇಡಿಕೆ ಹೆಚ್ಚಾಗಿದೆ.</p>.<p>ಗ್ರಾಮೀಣ ಭಾಗದಲ್ಲೂ ಚಳಿ ಹೆಚ್ಚಾಗಿದ್ದು, ಜನರು ಚಳಿಗಾಲಕ್ಕೆ ಹೊಂದಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p>.<p class="Briefhead"><strong>ಕೃಷಿಗೆ ತೊಂದರೆ ಇಲ್ಲ</strong><br />ಚಳಿಯಿಂದಾಗಿ ಕೃಷಿಗೆ ಯಾವುದೇ ತೊಂದರೆ ಇಲ್ಲ. ಕೆಲವು ಬೆಳೆಗಳಿಗೆ ಶೀತ ವಾತಾವರಣ ಅಗತ್ಯ ಇದೆ. ಕಡಲೆ, ಕೊತ್ತಂಬರಿ, ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಚಳಿಗಾಲದಲ್ಲಿ ಕಾಳು ಕಟ್ಟುವುದು ಹೆಚ್ಚು ಎಂದು ಹೇಳುತ್ತಾರೆ ರೈತರು.</p>.<p>ಸಾಮಾನ್ಯವಾಗಿ ಮಂಜು ಕವಿಯಲು ಆರಂಭವಾದರೆ ಮಳೆ ದೂರ ಹೋಯಿತು ಎಂಬ ನಂಬಿಕೆ ಜನರಲ್ಲಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಯೇ ಹೆಚ್ಚು ಬೀಳುವುದರಿಂದ ಚಳಿಗಾಲದ ಮಧ್ಯೆಯೂ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಚಳಿರಾಯ ನಿಧಾನವಾಗಿ ಗಡಿ ಜಿಲ್ಲೆಗೆ ಕಾಲಿಟ್ಟಿದ್ದಾನೆ. ವಾರದಿಂದೀಚೆಗೆ ಇಳಿ ಸಂಜೆಯಿಂದ ಬೆಳಗ್ಗಿನವರೆಗೆ ಶೀತ ವಾತಾವರಣ ಕಂಡು ಬರುತ್ತಿದ್ದು, ಉಷ್ಣಾಂಶ ದಿನೇ ದಿನೇ ಕುಸಿಯಲು ಆರಂಭಿಸಿದೆ.</p>.<p>ಕಳೆದ ವಾರದವರೆಗೂ 21–20 ಡಿಗ್ರಿ ಸೆಲ್ಸಿಯಸ್ನ ಆಸುಪಾಸಿನಲ್ಲಿದ್ದ ಕನಿಷ್ಠ ಉಷ್ಣಾಂಶ ಎರಡು ದಿನಗಳಿಂದ 17–16 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಗರಿಷ್ಠ ಉಷ್ಣಾಂಶ 27–28 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗುತ್ತಿದೆ.</p>.<p>ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ, ಜಿಲ್ಲಾ ಕೇಂದ್ರ ಚಾಮರಾಜನಗರದ ಮಂದಿಗೆ ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಚಳಿಯ ಅನುಭವವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೂ ಶೀತ ವಾತಾವರಣ ಇತ್ತು. ಸೂರ್ಯನ ಕಿರಣಗಳು ಸರಿಯಾಗಿ ಭೂಮಿಗೆ ಬಿದ್ದ ನಂತರವಷ್ಟೇ ವಾತಾವರಣ ಸ್ವಲ್ಪ ಬಿಸಿಯಾಯಿತು.</p>.<p class="Subhead"><strong>ವಿಳಂಬ:</strong> ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಚ ಚಳಿಗಾಲ ಆರಂಭ ಸ್ವಲ್ಪ ನಿಧಾನವಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರವೇ ಚಳಿ ಆರಂಭವಾಗಿತ್ತು. ನಾಲ್ಕೈದು ದಿನಗಳ ಕಾಲ ಕೊರೆಯುವ ಚಳಿ ಇದ್ದು, ನಂತರ ಕಡಿಮೆಯಾಗಿ, ನವೆಂಬರ್ ಎರಡನೇ ವಾರದಿಂದ ಮತ್ತೆ ಥರಗುಟ್ಟುವ ಚಳಿ ಶುರುವಾಗಿತ್ತು.</p>.<p>ಈ ಬಾರಿ ನವೆಂಬರ್ ಆರಂಭದವರೆಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದುದರಿಂದ ಚಳಿ ಆರಂಭ ಕೊಂಚ ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ.</p>.<p class="Subhead"><strong>ದೂರವಾದ ಮಳೆ:</strong> ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಜಿಲ್ಲೆಯಲ್ಲೂ ಕಳೆದ ವಾರದ ಮಧ್ಯದಲ್ಲಿ ಎರಡು ದಿನ ಮಳೆಯಾಗಿತ್ತು. ಆ ಬಳಿಕ ಎಲ್ಲೂ ಮಳೆ ಬಿದ್ದಿಲ್ಲ. ಇಬ್ಬನಿ ಹಾಗೂ ಮಂಜಿನ ಅಬ್ಬರ ಹೆಚ್ಚಾಗಿದೆ.</p>.<p>ಕೆರೆ ಕಟ್ಟೆಗಳು, ಅರಣ್ಯದ ಅಂಚು, ಕೃಷಿ ಜಮೀನಿನಲ್ಲಿ ಆವರಿಸುವ ಇಬ್ಬನಿ, ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತಿವೆ.</p>.<p>ಎರಡು ದಿನಗಳಿಂದ ಸಂಜೆ 5.30ರ ನಂತರ ಶೀತಗಾಳಿ ಬೀಸಲು ಆರಂಭಿಸುತ್ತಿದೆ. ಬೆಳಗಿನ ಜಾವ ಶೀತ ಹೆಚ್ಚಾಗಿದ್ದು, ಮಂಜಿನ ವಾತಾವರಣ ಕಂಡು ಬರುತ್ತಿದೆ.</p>.<p class="Subhead"><strong>ಜನಜೀವನದ ಮೇಲೆ ಪರಿಣಾಮ:</strong> ಚಳಿ ಹೆಚ್ಚಾಗುತ್ತಿದ್ದಂತೆಯೇ ಜನರ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಬೆಳಿಗ್ಗೆ ಬೇಗ ವಾಯುವಿಹಾರಕ್ಕೆ ತೆರಳುತ್ತಿದ್ದವರು ಸ್ವಲ್ಪ ತಡವಾಗಿ ಹೋಗುತ್ತಿದ್ದಾರೆ.</p>.<p>ಸ್ವೆಟರ್, ಜಾಕೆಟ್, ಟೊಪ್ಪಿ, ಮಫ್ಲರ್ಗಳನ್ನು ಸಾರ್ವಜನಿಕರು, ಮಕ್ಕಳು, ವಿದ್ಯಾರ್ಥಿಗಳು ಧರಿಸುತ್ತಿದ್ದಾರೆ. ಸೋಲಾರ್ ಹೀಟರ್ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಜನರು ಬಿಸಿನೀರು ಕಾಯಿಸುವುದಕ್ಕಾಗಿ ಒಲೆಯ ಮೊರೆ ಹೋಗಿದ್ದಾರೆ. ಹಾಗಾಗಿ, ತೆಂಗಿನ ಕಾಯಿ ಸಿಪ್ಪೆಗಳಿಗೆ (ಮಟ್ಟೆ) ಬೇಡಿಕೆ ಹೆಚ್ಚಾಗಿದೆ.</p>.<p>ಗ್ರಾಮೀಣ ಭಾಗದಲ್ಲೂ ಚಳಿ ಹೆಚ್ಚಾಗಿದ್ದು, ಜನರು ಚಳಿಗಾಲಕ್ಕೆ ಹೊಂದಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p>.<p class="Briefhead"><strong>ಕೃಷಿಗೆ ತೊಂದರೆ ಇಲ್ಲ</strong><br />ಚಳಿಯಿಂದಾಗಿ ಕೃಷಿಗೆ ಯಾವುದೇ ತೊಂದರೆ ಇಲ್ಲ. ಕೆಲವು ಬೆಳೆಗಳಿಗೆ ಶೀತ ವಾತಾವರಣ ಅಗತ್ಯ ಇದೆ. ಕಡಲೆ, ಕೊತ್ತಂಬರಿ, ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಚಳಿಗಾಲದಲ್ಲಿ ಕಾಳು ಕಟ್ಟುವುದು ಹೆಚ್ಚು ಎಂದು ಹೇಳುತ್ತಾರೆ ರೈತರು.</p>.<p>ಸಾಮಾನ್ಯವಾಗಿ ಮಂಜು ಕವಿಯಲು ಆರಂಭವಾದರೆ ಮಳೆ ದೂರ ಹೋಯಿತು ಎಂಬ ನಂಬಿಕೆ ಜನರಲ್ಲಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಯೇ ಹೆಚ್ಚು ಬೀಳುವುದರಿಂದ ಚಳಿಗಾಲದ ಮಧ್ಯೆಯೂ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>