<p><strong>ಯಳಂದೂರು: </strong>ಬಿಳಿಗಿರಿರಂಗನಬೆಟ್ಟ ವಿಶ್ವದಲ್ಲೇ ಅಪರೂಪದ ವನ್ಯಪ್ರಾಣಿ ಧಾಮ. ಇದರ ಜತೆಗೆ ಬಿಳಿಗಿರಿರಂಗನಾಥಸ್ವಾಮಿ ದೇಗುಲವೂ ಪ್ರಸಿದ್ಧಿ.ಇಷ್ಟೆಲ್ಲಾ ಮಹತ್ವ ಪಡೆದಿರುವ ಬೆಟ್ಟದಲ್ಲಿ ರಥದ ಬೀದಿಯೂ ಪ್ರಮುಖವಾದುದು. ಪ್ರತಿ ವರ್ಷ ಇಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಇದರ ಅಕ್ಕಪಕ್ಕ ಬಹುತೇಕ ಜನಾಂಗದವರ ಮಂಟಪಗಳೂ ಇವೆ.<br /> <br /> ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ ಅವ್ಯಾಹತವಾಗಿ ಬಳಸಲಾಗುತ್ತದೆ. ಈ ತ್ಯಾಜ್ಯವು ವಿಲೇವಾರಿಯಾಗದೇ ರಸ್ತೆಯ ಅಕ್ಕಪಕ್ಕದ್ಲ್ಲಲಿ ಹಾಗೂ ಚರಂಡಿಗಳಲ್ಲೇ ಕೊಳೆತು ನಾರುತ್ತಿದೆ. ಮಳೆಗಾಲ ಆರಂಭವಾಗುವ ಸೂಚನೆ ಇರುವುದರಿಂದ ಇದೆಲ್ಲಾ ಕಾಡಿಗೆ ಸೇರಿ ವನ್ಯ ಪ್ರಾಣಿಗಳ ಹೊಟ್ಟೆ ಸೇರುವ ಅಪಾಯವಿದೆ.<br /> <br /> ಆದರೆ, ಇದನ್ನು ಸ್ವಚ್ಛಗೊಳಿಸಲು ದೇಗುಲದ ಆಡಳಿತ ಮಂಡಳಿ ಹಾಗೂ ಯರಗಂಬಳ್ಳಿ ಗ್ರಾಮ ಪಂಚಾಯಿತಿ ನಡುವೆ ಆಗಾಗ ವಾಗ್ಯುದ್ಧಗಳು ನಡೆಯುವುದರಿಂದ ಕಸ ಇಲ್ಲೇ ಬಿದ್ದಿರುತ್ತದೆ. ಇಲ್ಲಿಂದ ಗ್ರಾಮ ಪಂಚಾ ಯಿತಿಗೆ ಯಾವುದೇ ಆದಾಯವಿಲ್ಲ. ಕೇಂದ್ರ ಸ್ಥಾನದಿಂದ ಇದೂ ದೂರವಿದೆ. <br /> <br /> ಕನಿಷ್ಟ ಸುಂಕದ ಹಕ್ಕನ್ನಾದರೂ ಪಂಚಾಯಿತಿಗೆ ವಹಿಸುವಂತೆ ಹಲವು ದಿನಗಳಿಂದಲೂ ಬೇಡಿಕೆ ಇದೆ. ಆದರೆ, ಮುಜರಾಯಿ ಇಲಾಖೆ ಇದಕ್ಕೆ ಮಣೆ ಹಾಕಿಲ್ಲ. ಅಲ್ಲದೆ ಕೂಲಿಯಾಳುಗಳು ಸಹ ಸಿಕ್ಕಿಲ್ಲ. ಹಾಗಾಗಿ ಇಲ್ಲಿನ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ ಎಂಬುದು ಹಲವರ ದೂರು.<br /> <br /> ಈ ಬಗ್ಗೆ ಹಲವು ಬಾರಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಗಳಲ್ಲೂ ಚರ್ಚೆ ನಡೆದಿದೆ. ಇದಕ್ಕೆ ದೇಗುಲದ ಆಡಳಿತ ಮಂಡಳಿ ಸ್ವಚ್ಛತೆಗೆ ಅನುದಾನ ಇಲ್ಲ ಹಾಗೂ ಕೂಲಿ ಯಾಳುಗಳ ಕೊರತೆ ಇರುವ ನೆಪವೊಡ್ಡುವುದರಿಂದ ತ್ಯಾಜ್ಯವೆಲ್ಲಾ ಇಲ್ಲೇ ಕೊಳೆತು ನಾರುತ್ತದೆ.<br /> <br /> `ರಾಜ್ಯಾದ್ಯಂತ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿ ಮೂಗು ಮುಚ್ಚಿ ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈಗಲಾದರೂ ಸಂಬಂಧಪಟ್ಟವರು ಇದರ ಸ್ವಚ್ಚತೆಗೆ ಗಮನ ಹರಿಸಲಿ~ ಎಂಬುದು ಸ್ಥಳೀಯರಾದ ನಾಗೇಂದ್ರ, ಜಡೇಗೌಡ, ಮಾದೇಗೌಡ ಸೇರಿದಂತೆ ಹಲವರ ದೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: </strong>ಬಿಳಿಗಿರಿರಂಗನಬೆಟ್ಟ ವಿಶ್ವದಲ್ಲೇ ಅಪರೂಪದ ವನ್ಯಪ್ರಾಣಿ ಧಾಮ. ಇದರ ಜತೆಗೆ ಬಿಳಿಗಿರಿರಂಗನಾಥಸ್ವಾಮಿ ದೇಗುಲವೂ ಪ್ರಸಿದ್ಧಿ.ಇಷ್ಟೆಲ್ಲಾ ಮಹತ್ವ ಪಡೆದಿರುವ ಬೆಟ್ಟದಲ್ಲಿ ರಥದ ಬೀದಿಯೂ ಪ್ರಮುಖವಾದುದು. ಪ್ರತಿ ವರ್ಷ ಇಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಇದರ ಅಕ್ಕಪಕ್ಕ ಬಹುತೇಕ ಜನಾಂಗದವರ ಮಂಟಪಗಳೂ ಇವೆ.<br /> <br /> ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ ಅವ್ಯಾಹತವಾಗಿ ಬಳಸಲಾಗುತ್ತದೆ. ಈ ತ್ಯಾಜ್ಯವು ವಿಲೇವಾರಿಯಾಗದೇ ರಸ್ತೆಯ ಅಕ್ಕಪಕ್ಕದ್ಲ್ಲಲಿ ಹಾಗೂ ಚರಂಡಿಗಳಲ್ಲೇ ಕೊಳೆತು ನಾರುತ್ತಿದೆ. ಮಳೆಗಾಲ ಆರಂಭವಾಗುವ ಸೂಚನೆ ಇರುವುದರಿಂದ ಇದೆಲ್ಲಾ ಕಾಡಿಗೆ ಸೇರಿ ವನ್ಯ ಪ್ರಾಣಿಗಳ ಹೊಟ್ಟೆ ಸೇರುವ ಅಪಾಯವಿದೆ.<br /> <br /> ಆದರೆ, ಇದನ್ನು ಸ್ವಚ್ಛಗೊಳಿಸಲು ದೇಗುಲದ ಆಡಳಿತ ಮಂಡಳಿ ಹಾಗೂ ಯರಗಂಬಳ್ಳಿ ಗ್ರಾಮ ಪಂಚಾಯಿತಿ ನಡುವೆ ಆಗಾಗ ವಾಗ್ಯುದ್ಧಗಳು ನಡೆಯುವುದರಿಂದ ಕಸ ಇಲ್ಲೇ ಬಿದ್ದಿರುತ್ತದೆ. ಇಲ್ಲಿಂದ ಗ್ರಾಮ ಪಂಚಾ ಯಿತಿಗೆ ಯಾವುದೇ ಆದಾಯವಿಲ್ಲ. ಕೇಂದ್ರ ಸ್ಥಾನದಿಂದ ಇದೂ ದೂರವಿದೆ. <br /> <br /> ಕನಿಷ್ಟ ಸುಂಕದ ಹಕ್ಕನ್ನಾದರೂ ಪಂಚಾಯಿತಿಗೆ ವಹಿಸುವಂತೆ ಹಲವು ದಿನಗಳಿಂದಲೂ ಬೇಡಿಕೆ ಇದೆ. ಆದರೆ, ಮುಜರಾಯಿ ಇಲಾಖೆ ಇದಕ್ಕೆ ಮಣೆ ಹಾಕಿಲ್ಲ. ಅಲ್ಲದೆ ಕೂಲಿಯಾಳುಗಳು ಸಹ ಸಿಕ್ಕಿಲ್ಲ. ಹಾಗಾಗಿ ಇಲ್ಲಿನ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ ಎಂಬುದು ಹಲವರ ದೂರು.<br /> <br /> ಈ ಬಗ್ಗೆ ಹಲವು ಬಾರಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಗಳಲ್ಲೂ ಚರ್ಚೆ ನಡೆದಿದೆ. ಇದಕ್ಕೆ ದೇಗುಲದ ಆಡಳಿತ ಮಂಡಳಿ ಸ್ವಚ್ಛತೆಗೆ ಅನುದಾನ ಇಲ್ಲ ಹಾಗೂ ಕೂಲಿ ಯಾಳುಗಳ ಕೊರತೆ ಇರುವ ನೆಪವೊಡ್ಡುವುದರಿಂದ ತ್ಯಾಜ್ಯವೆಲ್ಲಾ ಇಲ್ಲೇ ಕೊಳೆತು ನಾರುತ್ತದೆ.<br /> <br /> `ರಾಜ್ಯಾದ್ಯಂತ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿ ಮೂಗು ಮುಚ್ಚಿ ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈಗಲಾದರೂ ಸಂಬಂಧಪಟ್ಟವರು ಇದರ ಸ್ವಚ್ಚತೆಗೆ ಗಮನ ಹರಿಸಲಿ~ ಎಂಬುದು ಸ್ಥಳೀಯರಾದ ನಾಗೇಂದ್ರ, ಜಡೇಗೌಡ, ಮಾದೇಗೌಡ ಸೇರಿದಂತೆ ಹಲವರ ದೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>