<p><strong>ಹಗರಿಬೊಮ್ಮನಹಳ್ಳಿ: </strong>ಇಲ್ಲಿನ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಡ್ಡಾಯ ಮತದಾನದ ಚರ್ಚೆ ನಡೆಯಿತು. ಮದುವೆಗೆ ಬಂದವರಿಗೆ ನವದಂಪತಿ ವೋಟ್ ಹಾಕುವಂತೆ ಮನವಿ ಮಾಡಿದರು.</p>.<p>ಪಟ್ಟಣದ ಉಪ ತಹಶೀಲ್ದಾರ್ ಎಚ್.ನಾಗರಾಜ್ ಅವರು ಪೂಜಾ ಅವರೊಂದಿಗೆ ಮತದಾನದ ಜಾಗೃತಿ ಮೂಡಿಸುವ ಮೂಲಕ ಸಪ್ತಪದಿ ತುಳಿದರು.</p>.<p>ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಮದುವೆ ಪ್ರೇರಣೆ ನೀಡಿತು. ಇವಿಎಂ, ವಿವಿಪ್ಯಾಟ್ ಮಾಹಿತಿಯನ್ನೂ ಸಭಾಂಗಣದ ಹೊರಗೆ ನೀಡಲಾಯಿತು.</p>.<p>ಮೈಕ್ ಹಿಡಿದು ಮಾತನಾಡಿದ ಮದುಮಗ, ‘ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಹಕ್ಕು ಚಲಾಯಿಸಿ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು ಎಂದರು.</p>.<p>ವಧು ಪೂಜಾ ನಗುಮೊಗದೊಂದಿಗೆ ಪತಿ ಹೇಳಿದ ಮಾತುಗಳಿಗೆ ಸಮ್ಮತಿ ಸೂಚಿಸಿದರು. ಮದುವೆಗೆ ಬಂದವರಿಗೆ ಮತದಾನ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು.</p>.<p>ತಹಶೀಲ್ದಾರ್ ಎಸ್.ಮಹಾಬಲೇಶ್ವರ, ನೀತಿ ಸಂಹಿತೆ ಪಾಲನೆ ತಂಡದ ಮುಖ್ಯಸ್ಥ ಬಿ.ಮಲ್ಲಾನಾಯ್ಕ, ಲೆಕ್ಕಪತ್ರ ಉಪ ವೀಕ್ಷಕ ಡಕಣಾನಾಯ್ಕ, ಸಿಬ್ಬಂದಿ ಸಿ.ಎಂ.ಗುರುಬಸವರಾಜ,ಆಸೀಫ್ ಅಲಿ, ಚೇತನ್, ಶಿವಕುಮಾರಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಾಹಕ್ಕೆ ಸಾಕ್ಷಿಯಾದರು.</p>.<p>**<br /> ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಮತದಾನ ಆಗಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಅದಕ್ಕಾಗಿಯೇ ಮದುವೆಯಲ್ಲಿ ಈ ವಿನೂತನ ಪ್ರಯತ್ನ<br /> <strong>– ಎಚ್.ನಾಗರಾಜ, ವರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ: </strong>ಇಲ್ಲಿನ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಡ್ಡಾಯ ಮತದಾನದ ಚರ್ಚೆ ನಡೆಯಿತು. ಮದುವೆಗೆ ಬಂದವರಿಗೆ ನವದಂಪತಿ ವೋಟ್ ಹಾಕುವಂತೆ ಮನವಿ ಮಾಡಿದರು.</p>.<p>ಪಟ್ಟಣದ ಉಪ ತಹಶೀಲ್ದಾರ್ ಎಚ್.ನಾಗರಾಜ್ ಅವರು ಪೂಜಾ ಅವರೊಂದಿಗೆ ಮತದಾನದ ಜಾಗೃತಿ ಮೂಡಿಸುವ ಮೂಲಕ ಸಪ್ತಪದಿ ತುಳಿದರು.</p>.<p>ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಮದುವೆ ಪ್ರೇರಣೆ ನೀಡಿತು. ಇವಿಎಂ, ವಿವಿಪ್ಯಾಟ್ ಮಾಹಿತಿಯನ್ನೂ ಸಭಾಂಗಣದ ಹೊರಗೆ ನೀಡಲಾಯಿತು.</p>.<p>ಮೈಕ್ ಹಿಡಿದು ಮಾತನಾಡಿದ ಮದುಮಗ, ‘ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಹಕ್ಕು ಚಲಾಯಿಸಿ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು ಎಂದರು.</p>.<p>ವಧು ಪೂಜಾ ನಗುಮೊಗದೊಂದಿಗೆ ಪತಿ ಹೇಳಿದ ಮಾತುಗಳಿಗೆ ಸಮ್ಮತಿ ಸೂಚಿಸಿದರು. ಮದುವೆಗೆ ಬಂದವರಿಗೆ ಮತದಾನ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು.</p>.<p>ತಹಶೀಲ್ದಾರ್ ಎಸ್.ಮಹಾಬಲೇಶ್ವರ, ನೀತಿ ಸಂಹಿತೆ ಪಾಲನೆ ತಂಡದ ಮುಖ್ಯಸ್ಥ ಬಿ.ಮಲ್ಲಾನಾಯ್ಕ, ಲೆಕ್ಕಪತ್ರ ಉಪ ವೀಕ್ಷಕ ಡಕಣಾನಾಯ್ಕ, ಸಿಬ್ಬಂದಿ ಸಿ.ಎಂ.ಗುರುಬಸವರಾಜ,ಆಸೀಫ್ ಅಲಿ, ಚೇತನ್, ಶಿವಕುಮಾರಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಾಹಕ್ಕೆ ಸಾಕ್ಷಿಯಾದರು.</p>.<p>**<br /> ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಮತದಾನ ಆಗಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಅದಕ್ಕಾಗಿಯೇ ಮದುವೆಯಲ್ಲಿ ಈ ವಿನೂತನ ಪ್ರಯತ್ನ<br /> <strong>– ಎಚ್.ನಾಗರಾಜ, ವರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>