<p><strong>ಬೆಂಗಳೂರು: </strong>ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ’ಯಡಿ (ಪಿಸಿಎ) ಪ್ರಕರಣ ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.</p>.<p>ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಈ ಸಂಬಂಧ ದೂರು ನೀಡಿದ್ದಾರೆ.</p>.<p>ಶಾಸಕರು, ಬಸವೇಶ್ವರ ನಗರದ ಶಾರದಾ ಕಾಲೋನಿಯಲ್ಲಿ ₹ 1.46 ಕೋಟಿ ಪಾವತಿಸಿ ಮನೆ ಖರೀದಿಸಿದ್ದಾರೆ. ನೋಂದಣಿ ಹಾಗೂ ಸ್ಟ್ಯಾಂಪ್ ಶುಲ್ಕವಾಗಿ ₹ 11.85 ಲಕ್ಷ ಪಾವತಿಸಿದ್ದಾರೆ. ಈ ಉದ್ದೇಶಕ್ಕಾಗಿ ನಾಗರಾಜ್ ಎಂಬುವರಿಂದ ₹ 15 ಲಕ್ಷ ಹಾಗೂ ನಾರಾಯಣ ಎಂಬುವರಿಂದ<br /> ₹ 6 ಲಕ್ಷ ಸಾಲ ಪಡೆದಿದ್ದಾಗಿ ಹೇಳಿದ್ದಾರೆ. ಇದಲ್ಲದೆ, ನೆಲಮಂಗಲದ ದಾಸನಪುರದಲ್ಲಿ 2009ರ ಡಿಸೆಂಬರ್ನಲ್ಲಿ ತಮ್ಮ ತಾಯಿ ಸುಶೀಲಮ್ಮ ಮತ್ತು ಪುತ್ರಿ ಹೆಸರಿನಲ್ಲಿ ₹ 1.68 ಲಕ್ಷಕ್ಕೆ ಖರೀದಿಸಿದ್ದ ನಿವೇಶನವನ್ನು ₹ 22 ಲಕ್ಷ ಮಾರಿರುವುದಾಗಿ ಅವರು ವಿವರಿಸಿದ್ದಾರೆ.</p>.<p>ಇದು ಕೇವಲ 21 ತಿಂಗಳಲ್ಲಿ ಶೇ 654.76ರಷ್ಟು ಏರಿಕೆಯಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>ಸುರೇಶ್ ಕುಮಾರ್ ಸಲ್ಲಿಸಿರುವ ದಾಖಲೆಗಳು ಹಾಗೂ ಪ್ರಮಾಣ ಪತ್ರದ ಪ್ರಕಾರ, 2013ರ ಮಾರ್ಚ್ ಅಂತ್ಯಕ್ಕೆ ಅವರು ಹಾಗೂ ಅವರ ಕುಟುಂಬ<br /> ₹ 38.27 ಲಕ್ಷ ಸಾಲ ಮರುಪಾವತಿಸಿದ್ದು, ₹ 15.13ಲಕ್ಷ ಉಳಿತಾಯ ಮಾಡಿದೆ. ಆದರೆ, ಆ ವರ್ಷದ ಅವರ ಆದಾಯ ₹ 22.92 ಲಕ್ಷ ಎಂದು ಘೋಷಿಸಿದೆ. ಅಲ್ಲದೆ, ಬಸವೇಶ್ವರ ನಗರದ ಮನೆಗೆ ಕಡಿಮೆ ಮೌಲ್ಯ ತೋರಿಸಿ ನೋಂದಣಿ ಮಾಡಿಸಲಾಗಿದೆ.</p>.<p>ಆದಾಯ ತೆರಿಗೆ ಇಲಾಖೆಗೆ ಸರಿಯಾದ ಮಾಹಿತಿ ನೀಡದೆ, ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಸುರೇಶ್ ಕುಮಾರ್ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸೂರ್ಯ ಮನವಿ ಮಾಡಿದ್ದಾರೆ.</p>.<p>* ಇದು 2011ಕ್ಕೆ ಸಂಬಂಧಿಸಿದ ವಿಷಯ. ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆದಕಲಾಗಿದೆ. ನೋಟಿಸ್ ಬಂದರೆ ಸೂಕ್ತ ಉತ್ತರ ಕೊಡುತ್ತೇನೆ</p>.<p><em><strong>–ಎಸ್. ಸುರೇಶ್ ಕುಮಾರ್, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ’ಯಡಿ (ಪಿಸಿಎ) ಪ್ರಕರಣ ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.</p>.<p>ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಈ ಸಂಬಂಧ ದೂರು ನೀಡಿದ್ದಾರೆ.</p>.<p>ಶಾಸಕರು, ಬಸವೇಶ್ವರ ನಗರದ ಶಾರದಾ ಕಾಲೋನಿಯಲ್ಲಿ ₹ 1.46 ಕೋಟಿ ಪಾವತಿಸಿ ಮನೆ ಖರೀದಿಸಿದ್ದಾರೆ. ನೋಂದಣಿ ಹಾಗೂ ಸ್ಟ್ಯಾಂಪ್ ಶುಲ್ಕವಾಗಿ ₹ 11.85 ಲಕ್ಷ ಪಾವತಿಸಿದ್ದಾರೆ. ಈ ಉದ್ದೇಶಕ್ಕಾಗಿ ನಾಗರಾಜ್ ಎಂಬುವರಿಂದ ₹ 15 ಲಕ್ಷ ಹಾಗೂ ನಾರಾಯಣ ಎಂಬುವರಿಂದ<br /> ₹ 6 ಲಕ್ಷ ಸಾಲ ಪಡೆದಿದ್ದಾಗಿ ಹೇಳಿದ್ದಾರೆ. ಇದಲ್ಲದೆ, ನೆಲಮಂಗಲದ ದಾಸನಪುರದಲ್ಲಿ 2009ರ ಡಿಸೆಂಬರ್ನಲ್ಲಿ ತಮ್ಮ ತಾಯಿ ಸುಶೀಲಮ್ಮ ಮತ್ತು ಪುತ್ರಿ ಹೆಸರಿನಲ್ಲಿ ₹ 1.68 ಲಕ್ಷಕ್ಕೆ ಖರೀದಿಸಿದ್ದ ನಿವೇಶನವನ್ನು ₹ 22 ಲಕ್ಷ ಮಾರಿರುವುದಾಗಿ ಅವರು ವಿವರಿಸಿದ್ದಾರೆ.</p>.<p>ಇದು ಕೇವಲ 21 ತಿಂಗಳಲ್ಲಿ ಶೇ 654.76ರಷ್ಟು ಏರಿಕೆಯಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.</p>.<p>ಸುರೇಶ್ ಕುಮಾರ್ ಸಲ್ಲಿಸಿರುವ ದಾಖಲೆಗಳು ಹಾಗೂ ಪ್ರಮಾಣ ಪತ್ರದ ಪ್ರಕಾರ, 2013ರ ಮಾರ್ಚ್ ಅಂತ್ಯಕ್ಕೆ ಅವರು ಹಾಗೂ ಅವರ ಕುಟುಂಬ<br /> ₹ 38.27 ಲಕ್ಷ ಸಾಲ ಮರುಪಾವತಿಸಿದ್ದು, ₹ 15.13ಲಕ್ಷ ಉಳಿತಾಯ ಮಾಡಿದೆ. ಆದರೆ, ಆ ವರ್ಷದ ಅವರ ಆದಾಯ ₹ 22.92 ಲಕ್ಷ ಎಂದು ಘೋಷಿಸಿದೆ. ಅಲ್ಲದೆ, ಬಸವೇಶ್ವರ ನಗರದ ಮನೆಗೆ ಕಡಿಮೆ ಮೌಲ್ಯ ತೋರಿಸಿ ನೋಂದಣಿ ಮಾಡಿಸಲಾಗಿದೆ.</p>.<p>ಆದಾಯ ತೆರಿಗೆ ಇಲಾಖೆಗೆ ಸರಿಯಾದ ಮಾಹಿತಿ ನೀಡದೆ, ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಸುರೇಶ್ ಕುಮಾರ್ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸೂರ್ಯ ಮನವಿ ಮಾಡಿದ್ದಾರೆ.</p>.<p>* ಇದು 2011ಕ್ಕೆ ಸಂಬಂಧಿಸಿದ ವಿಷಯ. ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆದಕಲಾಗಿದೆ. ನೋಟಿಸ್ ಬಂದರೆ ಸೂಕ್ತ ಉತ್ತರ ಕೊಡುತ್ತೇನೆ</p>.<p><em><strong>–ಎಸ್. ಸುರೇಶ್ ಕುಮಾರ್, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>