ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆಗೆ ಮಳೆನೀರು ಸಂಗ್ರಹ ಅಳವಡಿಸುವ ಯೋಜನೆಗೆ ‘ಚಿಲುಮೆ’ ಎಂದು ಮರುನಾಮಕರಣ ಮಾಡಿಡಲಾಗಿದೆ. ‘ನೀರಿಗಾಗಿ ಒಂದಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಈಗಾಗಲೇ ಲಭ್ಯವಿರುವ ಸಂಪ್ಗಳಿಗೆ ನೀರು ಸಂಗ್ರಹಿಸಬಹುದು ಅಥವಾ ಇಂಗು ಗುಂಡಿಗಳನ್ನು ನಿರ್ಮಿಸಬಹುದು. ಈ ಯೋಜನೆ ಅಳವಡಿಸಿಕೊಳ್ಳುವ ಮನೆ ಮಾಲೀಕರಿಗೆ ₹5000 ಪ್ರೋತ್ಸಾಹ ಧನ ನೀಡಲಾಗುವುದು ಹೇಳಿದರು.