‘ಸಮಾಜ ಸುಧಾರಣೆ ಕನಸು ಕಂಡು ಸದಾ ಜಾತ್ಯತೀತ ತತ್ವ, ಮಾನವೀಯ ಮೌಲ್ಯ ಪ್ರತಿಪಾದಿಸುತ್ತಿದ್ದ ವೇಮನ ಅವರು ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದರು. ಅವರ ಅತ್ಯಮೂಲ್ಯ ವಚನಗಳನ್ನು ಮಕ್ಕಳು, ಯುವ ಸಮುದಾಯ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು. ವೇಮನ ಅವರಂತೆ ನಾವು ಆತ್ಮ, ಮನಸ್ಸು, ಆಚಾರ, ವಿಚಾರ, ಕಾಯಕ ನಿಷ್ಠೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ’ ಎಂದು ತಿಳಿಸಿದರು.