ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಗ್ರಾ‌.ಪಂ ಅಧ್ಯಕ್ಷರಾಗಿ ಅರುಣಮ್ಮ

ಎಲ್ಲೋಡು: ಲಾಟರಿ ಮೂಲಕ ಒಲಿದ ಅದೃಷ್ಟ
Last Updated 14 ಫೆಬ್ರುವರಿ 2021, 2:54 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅರುಣಮ್ಮ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಿ.ಎನ್. ಕೃಷ್ಣಾರೆಡ್ಡಿಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಅರುಣಮ್ಮ ಮತ್ತು ಬಿಜೆಪಿ ಬೆಂಬಲಿತ ಶಿವಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹನುಮಂತರೆಡ್ಡಿ ಮತ್ತು ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ತಲಾ 6 ಮತಗಳು ಚಲಾವಣೆಗೊಂಡವು. ಹಾಗಾಗಿ, ಲಾಟರಿ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಸಿಗಬತ್ ಉಲ್ಲಾ ತಿಳಿಸಿದ್ದಾರೆ.

ಸದಸ್ಯರಾದ ವೈ.ಎ. ಹರೀಶ್, ಎ. ಶ್ರೀನಾಥ್ ರೆಡ್ಡಿ, ಎ.ಕೆ. ಹರೀಶ್, ಶಾಂತಮ್ಮ, ಶಿವಮ್ಮ, ಹನುಮಂತರೆಡ್ಡಿ, ನಾಗಲಕ್ಷ್ಮಿ, ನಾಗಮ್ಮ, ಜ್ಯೋತಿ, ಮಮತಾ, ಪಿಡಿಒ ಫಣೀಂದ್ರ, ರವಿಕುಮಾರ್, ಪುನೀತ್, ಹರ್ಷದ್, ಮುಖಂಡ ಬುಳ್ಳಸಂದ್ರ ಬಾಬುರೆಡ್ಡಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಿರೆಡ್ಡಿ ಹಾಗೂ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT