ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ ರಜೆಯಲ್ಲಿದ್ದ ಕಾರಣ ಇತರೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಮುಂದಾದರು. ವಿದ್ಯಾರ್ಥಿ ಮುಖಂಡರು ಅವರ ಮಾತು ಕೇಳದೆ ಆಕ್ರೋಶ ವ್ಯಕ್ತಪಡಿಸಿ, ಚಾಲಕನ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಪದೆ ಪದೇ ನಡೆಯುತ್ತಿವೆ ಎಂದು ಪ್ರತಿಭಟನೆ ಪಟ್ಟುಹಿಡಿದು ಕುಳಿತರು.