ಸೂಸೆಪಾಳ್ಯಕ್ಕೆ ಸಾಗುವ ಹಾಗೂ ರಂಗಧಾಮ ಕೆರೆ ಹಿಂಬದಿಯ ರಸ್ತೆಯಲ್ಲಿ ಚಿಕ್ಕಗುಡಿ ನಿರ್ಮಿಸಿ ಅಂತೋಣಿ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಮೂರ್ತಿಯು ಮುರಿದು ಬಿದ್ದು, ದ್ವಾರದ ಗಾಜುಗಳು ಪುಡಿಯಾಗಿವೆ.ಪ್ರತಿ ಮಂಗಳವಾರ ಇಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದರು.