‘ಜಿಲ್ಲೆಯ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳು ಸರಬರಾಜಾಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಮುಗ್ದ, ಅಮಾಯಕ ಕಂದಮ್ಮಗಳ ಆರೋಗ್ಯ ಮತ್ತು ಪ್ರಾಣದ ಬಗ್ಗೆ ದಯಮಾಡಿ ಗಮನಿಸಲೇಬೇಕಾಗಿದೆ. ಯಾರ ಮಕ್ಕಳಾದರೇನು? ಮಕ್ಕಳು ಮಕ್ಕಳೇ ಅಲ್ಲವೇ? ಇದು ಸಂಬಂಧಪಟ್ಟವರ ಗಮನಕ್ಕೆ ಈವರೆಗೆ ಬಂದೇ ಇಲ್ಲವೇ’ ಎಂದು ಚಂದ್ರಶೇಖರ್ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ.