ನಾಗಿರೆಡ್ಡಿಹಳ್ಳಿ ಸರ್ವೆ ನಂಬರ್ 41ರ 10 ಎಕರೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಚಾಲನೆ ದೊರೆತು ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇಂದಿಗೂ ಕಾರ್ಯಾರಂಭವಾಗಿಲ್ಲ. ಇಲ್ಲಿ ಗುರುತಿಸಿರುವ ಸ್ಥಳ ಜೌಗು ಪ್ರದೇಶವಾಗಿದೆ. ಮಳೆ ಮತ್ತು ಜೌಗು ಕಾರಣ ಕಾಮಗಾರಿಗಳಿಗೆ ತೊಂದರೆ ಆಗಿದೆ. ಈಗ ಇಲ್ಲಿ ಫಿಲ್ಲರ್ ಅಳವಡಿಸಲಾಗಿದೆ.ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶ್ರೀನಿವಾಸ್ ಅವರು ಸೂಚಿಸಿದರು.