ನಿತ್ಯ ಐಬಸಾಪುರದಿಂದ ಜಂಗಮಕೋಟೆ ಕ್ರಾಸ್ಗೆ ಬಂದು ಹೋಗುತ್ತಿದ್ದ ನಿರಂಜನಮೂರ್ತಿ ಅವರು ಗುರುವಾರ ರಾತ್ರಿ ಮನೆಗೆ ವಾಪಾಸಾಗಿರಲಿಲ್ಲ. ಕುಟುಂಬದವರು ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಪ್ ಆಗಿತ್ತು. ಹೀಗಾಗಿ, ಅವರ ಕುಟುಂಬದವರು ಶುಕ್ರವಾರ ಬೆಳಿಗ್ಗೆ ಹುಡುಕಾಟ ನಡೆಸಿದ್ದರು.