ಶಾಂತಾ ಅವರು ನೌಕರಿ ಕಾಂ ವೆಬ್ಸೈಟ್ನಲ್ಲಿ ಸ್ವವಿವರಗಳನ್ನು ನೋಂದಾಯಿಸಿ ಕೆಲಸ ಹುಡುಕುತ್ತಿದ್ದರು. ಈ ವೇಳೆ ಗಣೇಶ್ ಎಂಬಾತ ಕರೆ ಮಾಡಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಶಾಂತ ಅವರಿಂದ ₹ 2,39 ಲಕ್ಷ ಪಡೆದಿದ್ದ. ನಂತರ ಹರೀಶ್ ಕುಮಾರ್ ಕರೆ ಮಾಡಿ ನಾವು ಪೊಲೀಸರು. ನಿಮಗೆ ವಂಚಿಸಿದವರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುತ್ತೇವೆ ಎಂದು ನಂಬಿಸಿ ₹ 55 ಸಾವಿರವನ್ನು ಆನ್ಲೈನ್ ಮೂಲಕ ಪಡೆದಿದ್ದ.