ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಕತ್ತರಿಸಿದ ಗಿಡಗಳ ಬುಡ ತೆಗೆದು ಹಾಕುತ್ತಿದ್ದ ವೇಳೆ ಜಕ್ಕಲಮಡಗು ಕುಡಿಯುವ ನೀರಿನ ಪೈಪ್ಲೈನ್ ಒಡೆದು ಹೋಯಿತು. ವಿಷಯ ತಿಳಿದು ನಗರಸಭೆ ಅಧಿಕಾರಿಗಳು ತಿಪ್ಪೇನಹಳ್ಳಿ ಬಳಿ ಇರುವ ವಾಲ್ವ್ ಬಂದ್ ಮಾಡುವ ವೇಳೆಗೆ ರಸ್ತೆಯುದ್ದಕ್ಕೂ ನೀರು ಹರಿದು ಮಡುಗಟ್ಟಿ ನಿಂತಿತ್ತು.