ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಪಾರ್ಶ್ವನಾಥ್ ಮಾತನಾಡಿ, ‘ಉದ್ಯಮ ಶೀಲತೆ ತರಬೇತಿ ಪಡೆಯುವ ಯುವ ಜನರು ಜಿಲ್ಲಾ ಕೈಗಾರಿಕಾ ಸಂಘ (ಡಿಐಸಿ), ಖಾದಿ ಗ್ರಾಮೋದ್ಯೋಗ ಮಂಡಳಿ (ಕೆವಿಐಬಿ), ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮತ್ತು ವಿವಿಧ ಬ್ಯಾಂಕ್ಗಳ ಮೂಲಕ ದೊರೆಯುವ ಸಾಲವನ್ನು ಪಡೆದು ಸ್ವಂತ ಉದ್ಯಮ ಕಟ್ಟಿ ಬೆಳೆಸುವ ಮೂಲಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.