ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆ ಮುಂದುವರಿಯುತ್ತ, ಕೆರೆಕಟ್ಟೆಗಳು ಖಾಲಿಯಾಗುತ್ತ ಕುಡಿಯುವ ನೀರಿಗೆ ಹಾಹಾಕಾರ ಗಣನೀಯವಾಗಿ ತಲೆದೋರುತ್ತ ಸಾಗಿದ್ದು ಜಿಲ್ಲಾಡಳಿತದಲ್ಲಿ, ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ ಕೆಲ ದಿನಗಳಿಂದ ಆಗಾಗ ಆರ್ಭಟಿಸುತ್ತಿರುವ ಮಳೆರಾಯ ಬೆಳೆಗಳನ್ನು ಸೊಂಪಾಗಿ ಮಾಡುವ ಜತೆಗೆ ಬರಿದಾಗಿ ಬಿರಿದಿದ್ದ ಜಲಮೂಲಗಳ ಒಡಲಲ್ಲಿ ಜಲರಾಶಿ ಕಾಣುವಂತೆ ಮಾಡಿದ್ದಾನೆ.