ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಾಹನ ಪಂಕ್ಚರ್‌: ಬೇರೆ ಕಾರಿನಲ್ಲಿ ತೆರಳಿದ ಸುಧಾಕರ್‌

Last Updated 30 ಮಾರ್ಚ್ 2022, 2:29 IST
ಅಕ್ಷರ ಗಾತ್ರ

ಗೌರಿಬಿದನೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತೆರಳುತ್ತಿದ್ದ ಸರ್ಕಾರಿ ವಾಹನ ಮಂಗಳವಾರ ‌ಸಂಜೆ ನಗರದ ನ್ಯಾಷನಲ್ ಕಾಲೇಜಿನ ಬಳಿ ಪಂಕ್ಚರ್ ಆದ ಪರಿಣಾಮ ಸಚಿವರು ಮತ್ತೊಂದು ಕಾರಿನಲ್ಲಿ ತೆರಳಿದರು.

ನಗರ ಹೊರವಲಯದ ಚೆಲ್ಲಾ ಫಾರಂನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಆಯೋಜಿಸಿದ್ದ ಸಭೆಗೆ ಆಗಮಿಸುತ್ತಿದ್ದ ವೇಳೆ ಈ‌ ಘಟನೆ ನಡೆದಿದೆ.

ಬಳಿಕ ಸಚಿವರು ಕಾರಿನಿಂದ ಕೆಳಗಿಳಿದು ಪರ್ಯಾಯವಾಗಿ ಮತ್ತೊಂದು ಕಾರಿನ ಮೂಲಕ ತೆರಳಿದರು. ಸಚಿವರ ಬೆಂಬಲಿಗರು ಹಾಗೂ ಕೆಲವು ಕಾರ್ಯಕರ್ತರು ‌ಸ್ಥಳದಲ್ಲೇ ಇದ್ದು ನಸು ಕತ್ತಲಿನಲ್ಲಿ ಕಾರಿನ ಚಕ್ರಕ್ಕೆ ಪಂಕ್ಚರ್ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದರು.

ಮಾರ್ಚ್‌ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಚಿಕ್ಕಬಳ್ಳಾಪುರ ‌ಜಿಲ್ಲೆಯ ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ, ಸ್ಥಳೀಯ ‌ಕಾರ್ಯಕರ್ತರೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸುವ ಸಲುವಾಗಿ ಸಚಿವರು ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT