<p><strong>ಚಿಂತಾಮಣಿ:</strong> ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಗುಲಾಬಿ ಬೆಳೆಯ ಸವರುವಿಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ವಿಜ್ಞಾನಿ ಸಿಂಧು ರೈತರಿಗೆ ಸಲಹೆ ನೀಡಿದರು.</p>.<p>ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಿಂದ ಗಿಡ್ನಹಳ್ಳಿ ಗ್ರಾಮದ ಕಾಂತಕುಮಾರ್ ತೋಟದಲ್ಲಿ ಗುಲಾಬಿ ಬೆಳೆಯಲ್ಲಿ ಸಕಾಲದಲ್ಲಿ ಸವರುವಿಕೆ ಮತ್ತು ಗುಲಾಬಿ ಮಿಶ್ರಣ ಬಳಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗಿಡದ ಸವರುವಿಕೆ ಮಾಡಿದ ವಾರದ ನಂತರ ಪ್ರತಿ ಗಿಡಕ್ಕೆ 50 ಗ್ರಾಂ. ಗುಲಾಬಿ ಮಿಶ್ರಣ ನೀಡುವುದರಿಂದ ಹೂವಿನ ಗುಣಮಟ್ಟ ಹೆಚ್ಚಿಸಬಹುದು. ಗುಲಾಬಿ ಬೆಳೆಯನ್ನು ಸಕಾಲದಲ್ಲಿ ಸವರುವಿಕೆ, ಮಿಶ್ರಣ ನೀಡುವುದು, ಗೊಬ್ಬರ ನೀಡುವುದು ಸೇರಿದಂತೆ ಎಲ್ಲವನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕೃಷಿ ವಿಜ್ಞಾನಿಗಳ ಸಲಹೆಯಂತೆ ಕಾಲಕಾಲಕ್ಕೆ ಅಗತ್ಯವಾದ ಬೇಸಾಯ, ನೀರು ಕೊಡುವುದು, ಸಕಾಲದಲ್ಲಿ ಹೂವಿನ ಕೊಯ್ಲು ಮಾಡುವುದರಿಂದ ಅಧಿಕ ಇಳುವರಿ ಪಡೆದು ಹೆಚ್ಚಿನ ಲಾಭಾಂಶ ಗಳಿಸಬಹುದು<br />ಎಂದರು.</p>.<p>ಬೇಸಾಯ ತಜ್ಞ ವಿಶ್ವನಾಥ್ ಮಾತನಾಡಿ, ಹೂವಿನ ಮಾರಾಟ, ಮಾರುಕಟ್ಟೆ ವಿವರಗಳನ್ನು ನೀಡಿದರು. ರೇಷ್ಮೆ ಕೃಷಿ ವಿಜ್ಞಾನಿ ಡಾ.ವಿನೋದಾ ಜೈವಿಕ ಗೊಬ್ಬರದ ಬಳಕೆಯ ಮಹತ್ವವನ್ನು ತಿಳಿಸಿಕೊಟ್ಟರು.</p>.<p>ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಗುಲಾಬಿ ಬೆಳೆಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಗುಲಾಬಿ ಬೆಳೆಯ ಸವರುವಿಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ವಿಜ್ಞಾನಿ ಸಿಂಧು ರೈತರಿಗೆ ಸಲಹೆ ನೀಡಿದರು.</p>.<p>ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಿಂದ ಗಿಡ್ನಹಳ್ಳಿ ಗ್ರಾಮದ ಕಾಂತಕುಮಾರ್ ತೋಟದಲ್ಲಿ ಗುಲಾಬಿ ಬೆಳೆಯಲ್ಲಿ ಸಕಾಲದಲ್ಲಿ ಸವರುವಿಕೆ ಮತ್ತು ಗುಲಾಬಿ ಮಿಶ್ರಣ ಬಳಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗಿಡದ ಸವರುವಿಕೆ ಮಾಡಿದ ವಾರದ ನಂತರ ಪ್ರತಿ ಗಿಡಕ್ಕೆ 50 ಗ್ರಾಂ. ಗುಲಾಬಿ ಮಿಶ್ರಣ ನೀಡುವುದರಿಂದ ಹೂವಿನ ಗುಣಮಟ್ಟ ಹೆಚ್ಚಿಸಬಹುದು. ಗುಲಾಬಿ ಬೆಳೆಯನ್ನು ಸಕಾಲದಲ್ಲಿ ಸವರುವಿಕೆ, ಮಿಶ್ರಣ ನೀಡುವುದು, ಗೊಬ್ಬರ ನೀಡುವುದು ಸೇರಿದಂತೆ ಎಲ್ಲವನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕೃಷಿ ವಿಜ್ಞಾನಿಗಳ ಸಲಹೆಯಂತೆ ಕಾಲಕಾಲಕ್ಕೆ ಅಗತ್ಯವಾದ ಬೇಸಾಯ, ನೀರು ಕೊಡುವುದು, ಸಕಾಲದಲ್ಲಿ ಹೂವಿನ ಕೊಯ್ಲು ಮಾಡುವುದರಿಂದ ಅಧಿಕ ಇಳುವರಿ ಪಡೆದು ಹೆಚ್ಚಿನ ಲಾಭಾಂಶ ಗಳಿಸಬಹುದು<br />ಎಂದರು.</p>.<p>ಬೇಸಾಯ ತಜ್ಞ ವಿಶ್ವನಾಥ್ ಮಾತನಾಡಿ, ಹೂವಿನ ಮಾರಾಟ, ಮಾರುಕಟ್ಟೆ ವಿವರಗಳನ್ನು ನೀಡಿದರು. ರೇಷ್ಮೆ ಕೃಷಿ ವಿಜ್ಞಾನಿ ಡಾ.ವಿನೋದಾ ಜೈವಿಕ ಗೊಬ್ಬರದ ಬಳಕೆಯ ಮಹತ್ವವನ್ನು ತಿಳಿಸಿಕೊಟ್ಟರು.</p>.<p>ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಗುಲಾಬಿ ಬೆಳೆಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>