<p><strong>ಶಿಡ್ಲಘಟ್ಟ</strong>: ‘ಬೇಸಿಗೆ ಕಾಲದಲ್ಲಿ ಮೇವಿಗೆ ಸಮಸ್ಯೆ ಆಗಬಹುದು ಅಂದ ಮಾತ್ರಕ್ಕೆ ಹಾಲು ಕೊಡುವ ರಾಸುಗಳನ್ನು ಮಾರಾಟ ಮಾಡಬೇಡಿ’ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ಮನವಿ ಮಾಡಿದರು.</p>.<p>ನಗರದಲ್ಲಿನ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೃತಪಟ್ಟ ಸೀಮೆ ಹಸುಗಳ ವಿಮೆ ಹಣದ ಚೆಕ್ ವಿತರಿಸಿ ಮಾತನಾಡಿದರು.</p>.<p>ಈ ವರ್ಷ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ಮೇವಿನ ಸಮಸ್ಯೆ ಎದುರಾಗಬಹುದು. ಅದು ಕೇವಲ ತಾತ್ಕಾಲಿಕ. ಸರ್ಕಾರವೂ ಸಹ ರೈತರ ಜತೆಗಿದ್ದು ಮೇವಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಧೈರ್ಯ ತುಂಬಿದರು.</p>.<p>ರೈತರು ತಪ್ಪದೆ ತಮ್ಮ ಸೀಮೆ ಹಸುಗಳಿಗೆ ವಿಮೆ ಮಾಡಿಸಿ, ಒಂದೊಮ್ಮೆ ರಾಸುಗಳು ಮೃತಪಟ್ಟರೆ ವಿಮೆ ಹಣವಾದರೂ ಕಷ್ಟಕ್ಕೆ ನೆರವಾಗುತ್ತದೆ ಎಂದು ವಿಮೆಯ ಮಹತ್ವವನ್ನು ವಿವರಿಸಿದರು. 30 ಮಂದಿ ರೈತರಿಗೆ ₹17 ಲಕ್ಷ ವಿಮೆಯ ಚೆಕ್ ವಿತರಿಸಲಾಯಿತು. ಕೋಚಿಮುಲ್ ಮೇಲ್ವಿಚಾರಕರು, ರೈತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ</strong>: ‘ಬೇಸಿಗೆ ಕಾಲದಲ್ಲಿ ಮೇವಿಗೆ ಸಮಸ್ಯೆ ಆಗಬಹುದು ಅಂದ ಮಾತ್ರಕ್ಕೆ ಹಾಲು ಕೊಡುವ ರಾಸುಗಳನ್ನು ಮಾರಾಟ ಮಾಡಬೇಡಿ’ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ಮನವಿ ಮಾಡಿದರು.</p>.<p>ನಗರದಲ್ಲಿನ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೃತಪಟ್ಟ ಸೀಮೆ ಹಸುಗಳ ವಿಮೆ ಹಣದ ಚೆಕ್ ವಿತರಿಸಿ ಮಾತನಾಡಿದರು.</p>.<p>ಈ ವರ್ಷ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ಮೇವಿನ ಸಮಸ್ಯೆ ಎದುರಾಗಬಹುದು. ಅದು ಕೇವಲ ತಾತ್ಕಾಲಿಕ. ಸರ್ಕಾರವೂ ಸಹ ರೈತರ ಜತೆಗಿದ್ದು ಮೇವಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಧೈರ್ಯ ತುಂಬಿದರು.</p>.<p>ರೈತರು ತಪ್ಪದೆ ತಮ್ಮ ಸೀಮೆ ಹಸುಗಳಿಗೆ ವಿಮೆ ಮಾಡಿಸಿ, ಒಂದೊಮ್ಮೆ ರಾಸುಗಳು ಮೃತಪಟ್ಟರೆ ವಿಮೆ ಹಣವಾದರೂ ಕಷ್ಟಕ್ಕೆ ನೆರವಾಗುತ್ತದೆ ಎಂದು ವಿಮೆಯ ಮಹತ್ವವನ್ನು ವಿವರಿಸಿದರು. 30 ಮಂದಿ ರೈತರಿಗೆ ₹17 ಲಕ್ಷ ವಿಮೆಯ ಚೆಕ್ ವಿತರಿಸಲಾಯಿತು. ಕೋಚಿಮುಲ್ ಮೇಲ್ವಿಚಾರಕರು, ರೈತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>