‘ಕಾವೇರಿ ನಡೆದು ಬಂದರೆ ನಮಗೆ ಸಂಪತ್ತು. ಓಡಿ ಬಂದರೆ ಪ್ರವಾಹ’ ಎನ್ನುವ ಗಾದೆ ತಮಿಳಿನಲ್ಲಿದೆ. ಆ ಪ್ರಕಾರ ಬಿದ್ದ ನೀರು ಭೂಮಿಯಲ್ಲಿ ಇಂಗಿ ಮೆದುವಾಗಿ ಹರಿಯಬೇಕು. ಆದರೆ ಗಿಡ, ಮರಗಳೇ ಇಲ್ಲದ ಕಾರಣ ಭೂಮಿಯಲ್ಲಿ ನೀರು ಇಂಗುತ್ತಿಲ್ಲ. ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಜಗಳ ನಡೆಯುತ್ತಲೇ ಇದೆ. ಆದರೆ ಕಾವೇರಿಯಲ್ಲಿ ನೀರು ಏಕೆ ಇಲ್ಲ ಎನ್ನುವ ಬಗ್ಗೆ ಆಲೋಚಿಸಬೇಕು ಎಂದರು.