ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿಯಲ್ಲಿ ಅ.23 ರಂದು ‘ಜನಸ್ಪಂದನ’ ಕಾರ್ಯಕ್ರಮ

Last Updated 16 ಅಕ್ಟೋಬರ್ 2019, 20:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಬಾಗೇಪಲ್ಲಿ ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ದರ್ಗಾ ಸರ್ಕಲ್ ಬಳಿಯ ಹೊಸ ಶಾದಿ ಮಹಲ್‌ನಲ್ಲಿ ಅ.23 (ಬುಧವಾರ) ರಂದು ‘ಜನಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ1ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ರಿಂದ ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಬಹುದು. ಕ್ಷೇತ್ರದಾದ್ಯಂತ ಇರುವ ಜ್ವಲಂತ ಸಮಸ್ಯೆಗಳಿಗೆ ನಾಗರಿಕರು ಪರಿಹಾರ ಕಂಡುಕೊಳ್ಳಲು ‘ಜನಸ್ಪಂದನ’ ಉತ್ತಮ ವೇದಿಕೆಯಾಗಿದೆ.

ರಸ್ತೆ ಗುಂಡಿಗಳು, ಕುಡಿಯುವ ನೀರು, ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆ, ಕೆರೆಗಳ ಅಭಿವೃದ್ಧಿ, ಬಿಡಾಡಿ ದನ, ನಾಯಿಗಳ ಕಾಟ, ಸರಗಳ್ಳತನ ಸೇರಿದಂತೆ ಹಲವು ಕುಂದುಕೊರತೆ ಕುರಿತು ಕ್ಷೇತ್ರದ ಶಾಸಕರು, ವಿವಿಧ ವಾರ್ಡ್‌ಗಳ ಪುರಸಭೆ ಸದಸ್ಯರು, ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಇತರ ಅಧಿಕಾರಿಗಳಲ್ಲಿ ನಾಗರಿಕರು ಅಹವಾಲು ಸಲ್ಲಿಸಬಹುದು. ಈ ಸಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಸೂಚಿಸಲಿದ್ದಾರೆ.

ಹೆಚ್ಚಿನ ಮಾಹಿತಿ ಸಂಪರ್ಕ: ಎನ್.ಪ್ರತಾಪ್‌ – 9606931760.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT