‘ಕಳೆದ ಆರು ತಿಂಗಳಿಂದ ವಿವಿಧ ದೇಶಗಳಂತೆ ರಾಜ್ಯದಲ್ಲಿ ಕೂಡ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಸಂಸದರ ಅನುದಾನದಲ್ಲಿ ಕೂಡ ಖೋತಾ ಆಗಿದೆ. ಆರ್ಥಿಕ ಇತಿಮಿತಿ ಒಳಗೆ ಮುಖ್ಯಮಂತ್ರಿ ಅವರು ಎಲ್ಲ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಗಳು ಸುಸ್ಥಿರ, ಸುಭಿಕ್ಷವಾಗಿದ್ದಾಗಲೂ ಯಾವ ಸರ್ಕಾರವೂ ಸಕಾಲಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ನೀಡಿದ್ದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.