<figcaption>""</figcaption>.<p><strong>ಚಿಕ್ಕಬಳ್ಳಾಪುರ: </strong>ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ‘ಮಯೂರ ಫೈನ್ಟಾಪ್’ ಹೋಟೆಲ್ನಲ್ಲಿ ಲಾಕ್ಡೌನ್ ಅವಧಿಯಲ್ಲಿ ಮದ್ಯ ಕಳ್ಳತನ ಮಾಡಿದ ಉಗ್ರಾಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.</p>.<p>ಹೋಟೆಲ್ನ ಮದ್ಯ ದಾಸ್ತಾನಿನಲ್ಲಿ ಲಾಕ್ಡೌನ್ ಅವಧಿಯಲ್ಲಿ 300 ಎಂ.ಎಲ್ ಸಾಮರ್ಥ್ಯದ 21 ಮದ್ಯದ ಟಿನ್ಗಳು ಕಾಣೆಯಾಗಿರುವ ಬಗ್ಗೆ ‘ಪ್ರಜಾವಾಣಿ’ ಭಾನುವಾರ (ಮೇ 3) <a href="https://www.prajavani.net/district/chikkaballapur/nandi-hills-kstdc-hotels-liquor-storage-monkeys-culprit-724421.html" target="_blank">‘ಕೋತಿ ಕೊರಳಿಗೆ ಮದ್ಯದ ಗೋಲ್ ಮಾಲ್’</a>ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.</p>.<p>ವರದಿ ಪ್ರಕಟವಾದ ಬೆನ್ನಲ್ಲೇ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರು ‘ಮಯೂರ ಫೈನ್ಟಾಪ್’ ಹೋಟೆಲ್ನ ಉಗ್ರಾಣ ಅಧಿಕಾರಿ ಜಯಭೀಮಾ ಅವರನ್ನು ಅಮಾನತು ಮಾಡಿದ್ದಾರೆ.</p>.<p>‘ಮಯೂರ ಫೈನ್ಟಾಪ್’ ಹೋಟೆಲ್ನ ಉಗ್ರಾಣದಿಂದ ಅಕ್ರಮವಾಗಿ ಟಿನ್ ಗಳನ್ನು ಕದ್ದು ಹೊರಗೆ ಸಾಗಿಸಿದ ಬಗ್ಗೆ ಉಗ್ರಾಣ ಅಧಿಕಾರಿ ಜಯಭೀಮಾ ಅವರು ತಪ್ಪು ಒಪ್ಪಿಕೊಂಡು, ಕದ್ದ ಮದ್ಯದ ಮೌಲ್ಯವನ್ನು ಅವರು ಪಾವತಿಸಿದ್ದಾರೆ' ಎಂದು ಕುಮಾರ್ ಪುಷ್ಕರ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಜಯಭೀಮಾ ಅವರ ವಿರುದ್ಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್ನ ಸಿ.ಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತರಿಸಿಕೊಂಡು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ' ಎಂದು ಹೇಳಿದರು.</p>.<p>ಮದ್ಯದ ದಾಸ್ತಾನಿನ ಈ ಗೋಲ್ಮಾಲ್ ಬಗ್ಗೆ ಹೋಟೆಲ್ ವ್ಯವಸ್ಥಾಪಕ ಮಂಜೇಗೌಡ ಅವರು ಏ. 28ರಂದು ಕುಮಾರ್ ಪುಷ್ಕರ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿತ್ತು.</p>.<p>ಸೋಜಿಗದ ಸಂಗತಿ ಎಂದರೆ ಮದ್ಯದ ಟಿನ್ಗಳನ್ನು ಕೋತಿಗಳು ಹಾಳು ಮಾಡಿವೆ ಎಂದು ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಚಿಕ್ಕಬಳ್ಳಾಪುರ: </strong>ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ‘ಮಯೂರ ಫೈನ್ಟಾಪ್’ ಹೋಟೆಲ್ನಲ್ಲಿ ಲಾಕ್ಡೌನ್ ಅವಧಿಯಲ್ಲಿ ಮದ್ಯ ಕಳ್ಳತನ ಮಾಡಿದ ಉಗ್ರಾಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.</p>.<p>ಹೋಟೆಲ್ನ ಮದ್ಯ ದಾಸ್ತಾನಿನಲ್ಲಿ ಲಾಕ್ಡೌನ್ ಅವಧಿಯಲ್ಲಿ 300 ಎಂ.ಎಲ್ ಸಾಮರ್ಥ್ಯದ 21 ಮದ್ಯದ ಟಿನ್ಗಳು ಕಾಣೆಯಾಗಿರುವ ಬಗ್ಗೆ ‘ಪ್ರಜಾವಾಣಿ’ ಭಾನುವಾರ (ಮೇ 3) <a href="https://www.prajavani.net/district/chikkaballapur/nandi-hills-kstdc-hotels-liquor-storage-monkeys-culprit-724421.html" target="_blank">‘ಕೋತಿ ಕೊರಳಿಗೆ ಮದ್ಯದ ಗೋಲ್ ಮಾಲ್’</a>ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.</p>.<p>ವರದಿ ಪ್ರಕಟವಾದ ಬೆನ್ನಲ್ಲೇ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರು ‘ಮಯೂರ ಫೈನ್ಟಾಪ್’ ಹೋಟೆಲ್ನ ಉಗ್ರಾಣ ಅಧಿಕಾರಿ ಜಯಭೀಮಾ ಅವರನ್ನು ಅಮಾನತು ಮಾಡಿದ್ದಾರೆ.</p>.<p>‘ಮಯೂರ ಫೈನ್ಟಾಪ್’ ಹೋಟೆಲ್ನ ಉಗ್ರಾಣದಿಂದ ಅಕ್ರಮವಾಗಿ ಟಿನ್ ಗಳನ್ನು ಕದ್ದು ಹೊರಗೆ ಸಾಗಿಸಿದ ಬಗ್ಗೆ ಉಗ್ರಾಣ ಅಧಿಕಾರಿ ಜಯಭೀಮಾ ಅವರು ತಪ್ಪು ಒಪ್ಪಿಕೊಂಡು, ಕದ್ದ ಮದ್ಯದ ಮೌಲ್ಯವನ್ನು ಅವರು ಪಾವತಿಸಿದ್ದಾರೆ' ಎಂದು ಕುಮಾರ್ ಪುಷ್ಕರ್ 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಜಯಭೀಮಾ ಅವರ ವಿರುದ್ಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್ನ ಸಿ.ಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತರಿಸಿಕೊಂಡು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ' ಎಂದು ಹೇಳಿದರು.</p>.<p>ಮದ್ಯದ ದಾಸ್ತಾನಿನ ಈ ಗೋಲ್ಮಾಲ್ ಬಗ್ಗೆ ಹೋಟೆಲ್ ವ್ಯವಸ್ಥಾಪಕ ಮಂಜೇಗೌಡ ಅವರು ಏ. 28ರಂದು ಕುಮಾರ್ ಪುಷ್ಕರ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿತ್ತು.</p>.<p>ಸೋಜಿಗದ ಸಂಗತಿ ಎಂದರೆ ಮದ್ಯದ ಟಿನ್ಗಳನ್ನು ಕೋತಿಗಳು ಹಾಳು ಮಾಡಿವೆ ಎಂದು ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>