<p><strong>ಗೌರಿಬಿದನೂರು: </strong>ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸುವ ಮೆಗಾ ಲೋಕ ಅದಾಲತ್ನಲ್ಲಿ ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಕಕ್ಷಿದಾರರ ಸಮಯ, ಹಣ ಉಳಿತಾಯವಾಗುತ್ತದೆ ಎಂದು ಹಿರಿಯ ಶ್ರೇಣಿನ್ಯಾಯಾಧೀಶೆ ರೇಣುಕಾ ದೇವಿದಾಸ್<br />ರಾಯ್ಕರ್ ತಿಳಿಸಿದರು.</p>.<p>ನಗರದನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಮೆಗಾ ಲೋಕ ಅದಾಲತ್ಗೆ ಚಾಲನೆ ನೀಡಿ ಮಾತನಾಡಿದರು.</p>.<p>ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುತ್ತದೆ. ಸುಮಾರು 3 ಸಾವಿರ ಪ್ರಕರಣಗಳು ಅದಾಲತ್ಗೆ ಬಂದಿದ್ದು, ಅದರಲ್ಲಿ ರಾಜಿ ಸಂಧಾನದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎಲ್ಲ ಪ್ರಕರಣಗಳಿಂದ ಒಂದು ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿ ವಿಶೇಷವಾಗಿ 100ಕ್ಕೂ ಹೆಚ್ಚು ಪ್ರಕರಣಗಳು ಸುಮಾರು 20 ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥ ಮಾಡಲಾಗಿದೆ<br />ಎಂದರು.</p>.<p>ಸಿವಿಲ್ ಕ್ರಿಮಿನಲ್, ಬ್ಯಾಂಕ್ ಪ್ರಕರಣ, ವಿಚ್ಛೇದನ ಪ್ರಕರಣ, ಜಮೀನು ವ್ಯಾಜ್ಯಗಳು, ರೈಲ್ವೆ ಟೆಲಿಕಾಂ ಪ್ರಕರಣಗಳು, ಶಿಕ್ಷಣ ಇಲಾಖೆಯ ಹುಟ್ಟಿದ ದಿನಾಂಕ (ಹುಟ್ಟಿದ ದಿನಾಂಕದ ಪ್ರಮಾಣ ಪತ್ರ) ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ<br />ಎಂದರು.</p>.<p>ಅದಾಲತ್ನಲ್ಲಿ ವಕೀಲ ಸಂಘದ ಅಧ್ಯಕ್ಷ ಡಿ.ರಾಮದಾಸ್, ಉಪಾಧ್ಯಕ್ಷ ಬಿ.ಲಿಂಗಪ್ಪ, ದಯಾನಂದ್, ನಾಗರಾಜು, ವಿ.ಗೋಪಾಲ್, ರಾಜಿ ಸಂಧಾನಕಾರರಾಗಿ ವಕೀಲರಾದ ವಸಂತ್ಕುಮಾರ್, ಶ್ರೀನಾಥ್, ನರಸಿಂಹಮೂರ್ತಿ, ವಕೀಲ ಮಲ್ಲಿಕಾರ್ಜುನ, ಎಚ್.ಎಲ್.ವೆಂಕಟೇಶ್, ಪಾರ್ಶ್ವನಾಥ್, ರಂಗನಾಥ್, ಗುಂಡಾಪುರ ಆನಂದ್, ನಟರಾಜು, ರಾಮಚಂದ್ರ, ದೀನೇಶ್, ಅಶೋಕ್ ಕುಮಾರ್,<br />ಆದಿನಾರಾಯಣಗೌಡ, ಚೆನ್ನಮಲ್ಲಿಕಾರ್ಜುನ, ಪ್ರಭಾಕರ್, ನ್ಯಾಯಾಲಯ ಸಿಬ್ಬಂದಿ ನರಸಿಂಹಮೂರ್ತಿ, ಸಂಧ್ಯಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು: </strong>ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸುವ ಮೆಗಾ ಲೋಕ ಅದಾಲತ್ನಲ್ಲಿ ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಕಕ್ಷಿದಾರರ ಸಮಯ, ಹಣ ಉಳಿತಾಯವಾಗುತ್ತದೆ ಎಂದು ಹಿರಿಯ ಶ್ರೇಣಿನ್ಯಾಯಾಧೀಶೆ ರೇಣುಕಾ ದೇವಿದಾಸ್<br />ರಾಯ್ಕರ್ ತಿಳಿಸಿದರು.</p>.<p>ನಗರದನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಮೆಗಾ ಲೋಕ ಅದಾಲತ್ಗೆ ಚಾಲನೆ ನೀಡಿ ಮಾತನಾಡಿದರು.</p>.<p>ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುತ್ತದೆ. ಸುಮಾರು 3 ಸಾವಿರ ಪ್ರಕರಣಗಳು ಅದಾಲತ್ಗೆ ಬಂದಿದ್ದು, ಅದರಲ್ಲಿ ರಾಜಿ ಸಂಧಾನದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎಲ್ಲ ಪ್ರಕರಣಗಳಿಂದ ಒಂದು ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿ ವಿಶೇಷವಾಗಿ 100ಕ್ಕೂ ಹೆಚ್ಚು ಪ್ರಕರಣಗಳು ಸುಮಾರು 20 ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥ ಮಾಡಲಾಗಿದೆ<br />ಎಂದರು.</p>.<p>ಸಿವಿಲ್ ಕ್ರಿಮಿನಲ್, ಬ್ಯಾಂಕ್ ಪ್ರಕರಣ, ವಿಚ್ಛೇದನ ಪ್ರಕರಣ, ಜಮೀನು ವ್ಯಾಜ್ಯಗಳು, ರೈಲ್ವೆ ಟೆಲಿಕಾಂ ಪ್ರಕರಣಗಳು, ಶಿಕ್ಷಣ ಇಲಾಖೆಯ ಹುಟ್ಟಿದ ದಿನಾಂಕ (ಹುಟ್ಟಿದ ದಿನಾಂಕದ ಪ್ರಮಾಣ ಪತ್ರ) ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ<br />ಎಂದರು.</p>.<p>ಅದಾಲತ್ನಲ್ಲಿ ವಕೀಲ ಸಂಘದ ಅಧ್ಯಕ್ಷ ಡಿ.ರಾಮದಾಸ್, ಉಪಾಧ್ಯಕ್ಷ ಬಿ.ಲಿಂಗಪ್ಪ, ದಯಾನಂದ್, ನಾಗರಾಜು, ವಿ.ಗೋಪಾಲ್, ರಾಜಿ ಸಂಧಾನಕಾರರಾಗಿ ವಕೀಲರಾದ ವಸಂತ್ಕುಮಾರ್, ಶ್ರೀನಾಥ್, ನರಸಿಂಹಮೂರ್ತಿ, ವಕೀಲ ಮಲ್ಲಿಕಾರ್ಜುನ, ಎಚ್.ಎಲ್.ವೆಂಕಟೇಶ್, ಪಾರ್ಶ್ವನಾಥ್, ರಂಗನಾಥ್, ಗುಂಡಾಪುರ ಆನಂದ್, ನಟರಾಜು, ರಾಮಚಂದ್ರ, ದೀನೇಶ್, ಅಶೋಕ್ ಕುಮಾರ್,<br />ಆದಿನಾರಾಯಣಗೌಡ, ಚೆನ್ನಮಲ್ಲಿಕಾರ್ಜುನ, ಪ್ರಭಾಕರ್, ನ್ಯಾಯಾಲಯ ಸಿಬ್ಬಂದಿ ನರಸಿಂಹಮೂರ್ತಿ, ಸಂಧ್ಯಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>