ತಾಲೂಕಿನಲ್ಲಿ ಸುಸಜ್ಜಿತ ಮಾವಿನ ಸಂಸ್ಕರಣಾ ಘಟಕ ಅಥವಾ ಶೀತಲೀಕರಣ ಕೇಂದ್ರದ ಕೊರತೆ ಇದೆ. ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುವರು. ಒಂದು ವೇಳೆ ಈ ಬಾರಿ ಫಸಲು ಹೆಚ್ಚಾದರೆ ಬೆಲೆ ಕುಸಿಯುವ ಭೀತಿ ಕಾಡುತ್ತಿದೆ. ಆದ್ದರಿಂದ ಸರ್ಕಾರವು ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
–ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಅಧ್ಯಕ್ಷ
ಗಿಡಗಳು ಚೆನ್ನಾಗಿ ಹೂ ಬಿಟ್ಟಿವೆ. ಬಿಸಿಲು ಹೆಚ್ಚಾದಂತೆ ಹೂವು ಬಾಡುತ್ತಿದೆ. ರೋಗ ತಡೆಗಟ್ಟಲು ಔಷಧಿ ಹೊಡೆಯುತ್ತಿದ್ದೇವೆ. ಸರ್ಕಾರ ಈ ಬಾರಿ ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
–ಚೌಡರೆಡ್ಡಿ ರೈತ
ಔಷಧಿ ಸಿಂಪಡಣೆಗೇ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಫಸಲು ಮಾರುಕಟ್ಟೆಗೆ ಬಂದಾಗ ಸರಿಯಾದ ಬೆಲೆ ಸಿಗದಿದ್ದರೆ ನಾವು ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ.