ಇಲ್ಲಿನ ಪ್ರಮುಖ ಬೆಳೆಗಳಾದ ನೆಲಗಡಲೆ, ಮುಸುಕಿನಜೋಳ, ರಾಗಿ, ಭತ್ತ ಬೆಳೆಯಲು ಅನುಕೂಲ ಆಗುತ್ತದೆ. ತಾಲ್ಲೂಕಿನಲ್ಲಿ ನೀರಿನ ಕೊರತೆಯಿಂದ ರೈತರು, ಸಿಮೆಂಟ್, ಗಾರೆ ಕೆಲಸ ಮಾಡುತ್ತಿದ್ದಾರೆ. ಕೂಲಿ ನಂಬಿಯೇ ಜೀವನ ನಡೆಸಬೇಕಿದೆ. ಕೆಲ ರೈತರು ಹೊಲ-ಗದ್ದೆಗಳನ್ನು ಬೀಡಾಗಿರಿಸಿ ಬೆಂಗಳೂರು, ಮುಂಬೈಗಳಿಗೆ ವಲಸೆ ಹೋಗುತ್ತಿದ್ದಾರೆ. ಅಂತರ್ಜಲದ ಮರುಪೂರಣ ಮಾಡಲು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಇದೆ.