<p><strong>ಚಿಕ್ಕಬಳ್ಳಾಪುರ</strong>: ಓಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ತಾಲ್ಲೂಕಿನ ನಂದಿಗಿರಿಧಾಮಕ್ಕೆ ಮಂಗಳವಾರ ಭೇಟಿ ನೀಡಿ, ಗಿರಿಧಾಮದ ಸೌಂದರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಪ್ರವತಿ ಪರಿದಾ ಅವರು ಓಡಿಶಾ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪ್ರವಾಸೋದ್ಯಮ ಸಚಿವರೂ ಆಗಿದ್ದಾರೆ. </p>.<p>ಮಧ್ಯಾಹ್ನ ಗಿರಿಧಾಮಕ್ಕೆ ಬಂದ ಅವರು ನೆಹರೂ ನಿಲಯಯದ ವಿವಿಐಪಿ ಕೊಠಡಿಯಲ್ಲಿ ತಂಗಿದರು. ನಂದಿಗಿರಿಧಾಮದ ಬಗ್ಗೆ ಮತ್ತು ಗಿರಿಧಾಮದಲ್ಲಿ ಇರುವ ವಸತಿ ಸಂಕೀರ್ಣಗಳ ಬಗ್ಗೆ ಮಾಹಿತಿ ಪಡೆದರು. ‘ಮಹನೀಯರು ತಂಗಿದ ಜಾಗದಲ್ಲಿ ನಾವು ತಂಗಿದ್ದೇವೆ. ಇದು ಖುಷಿಯ ವಿಷಯ’ ಎಂದರು. </p>.<p>ಮಯೂರ ಹೋಟೆಲ್ನಲ್ಲಿ ಊಟ ಸೇವಿಸಿದ ಪ್ರವತಿ ಪರಿದಾ ಊಟ ಮತ್ತು ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಹೋಟೆಲ್ನಲ್ಲಿ ಗುಣಮಟ್ಟವಿದೆ ಎಂದು ಪ್ರಶಂಸಿಸಿದರು. </p>.<p>ನಂತರ ಗಿರಿಧಾಮದ ಸಭಾಂಗಣದಲ್ಲಿ ಪ್ರಭಾಸಿ ಓಡಿಯಾ ಪರಿವಾರವು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡರು. ಬೆಂಗಳೂರಿನಲ್ಲಿ ನೆಲೆಸಿರುವ ಓಡಿಶಾ ಮೂಲದ ಜನರು ಈ ಸಭೆ ಹಮ್ಮಿಕೊಂಡಿದ್ದರು.</p>.<p>ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಂದಿಗಿರಿಧಾಮದ ವ್ಯವಸ್ಥಾಪಕ ಮನೋಜ್ ಹಾಗೂ ಸಿಬ್ಬಂದಿ ಆತಿಥ್ಯ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಓಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ತಾಲ್ಲೂಕಿನ ನಂದಿಗಿರಿಧಾಮಕ್ಕೆ ಮಂಗಳವಾರ ಭೇಟಿ ನೀಡಿ, ಗಿರಿಧಾಮದ ಸೌಂದರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. </p>.<p>ಪ್ರವತಿ ಪರಿದಾ ಅವರು ಓಡಿಶಾ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪ್ರವಾಸೋದ್ಯಮ ಸಚಿವರೂ ಆಗಿದ್ದಾರೆ. </p>.<p>ಮಧ್ಯಾಹ್ನ ಗಿರಿಧಾಮಕ್ಕೆ ಬಂದ ಅವರು ನೆಹರೂ ನಿಲಯಯದ ವಿವಿಐಪಿ ಕೊಠಡಿಯಲ್ಲಿ ತಂಗಿದರು. ನಂದಿಗಿರಿಧಾಮದ ಬಗ್ಗೆ ಮತ್ತು ಗಿರಿಧಾಮದಲ್ಲಿ ಇರುವ ವಸತಿ ಸಂಕೀರ್ಣಗಳ ಬಗ್ಗೆ ಮಾಹಿತಿ ಪಡೆದರು. ‘ಮಹನೀಯರು ತಂಗಿದ ಜಾಗದಲ್ಲಿ ನಾವು ತಂಗಿದ್ದೇವೆ. ಇದು ಖುಷಿಯ ವಿಷಯ’ ಎಂದರು. </p>.<p>ಮಯೂರ ಹೋಟೆಲ್ನಲ್ಲಿ ಊಟ ಸೇವಿಸಿದ ಪ್ರವತಿ ಪರಿದಾ ಊಟ ಮತ್ತು ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಹೋಟೆಲ್ನಲ್ಲಿ ಗುಣಮಟ್ಟವಿದೆ ಎಂದು ಪ್ರಶಂಸಿಸಿದರು. </p>.<p>ನಂತರ ಗಿರಿಧಾಮದ ಸಭಾಂಗಣದಲ್ಲಿ ಪ್ರಭಾಸಿ ಓಡಿಯಾ ಪರಿವಾರವು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡರು. ಬೆಂಗಳೂರಿನಲ್ಲಿ ನೆಲೆಸಿರುವ ಓಡಿಶಾ ಮೂಲದ ಜನರು ಈ ಸಭೆ ಹಮ್ಮಿಕೊಂಡಿದ್ದರು.</p>.<p>ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಂದಿಗಿರಿಧಾಮದ ವ್ಯವಸ್ಥಾಪಕ ಮನೋಜ್ ಹಾಗೂ ಸಿಬ್ಬಂದಿ ಆತಿಥ್ಯ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>