‘ಈ ಅವಧಿಯಲ್ಲಿ ಸರ್ಕಾರದಿಂದ ರೈತರಿಗೆ ನೀಡಿರುವ ಸಾಲ, ಪ್ರೋತ್ಸಾಹ ಧನ, ಸಬ್ಸಿಡಿ, ನರೇಗಾ, ಕೃಷಿಭಾಗ್ಯ, ಇಂಗುಗುಂಡಿ ನಿರ್ಮಾಣ ಇತರೆ ಸೌಲಭ್ಯಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ರೈತರಲ್ಲದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರಲ್ಲೂ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ರೈತರಿಗೆ ಸೇರಬೇಕಾದ ಹಣ ಲಪಟಾಯಿಸಲಾಗಿದೆ’ ಎಂದು ಆರೋಪಿಸಿದರು.