ಶಿಡ್ಲಘಟ್ಟ: ತಾಲ್ಲೂಕಿನ ಇದ್ಲೂಡು ಗ್ರಾಮದ ವೇಣು ಅವರಿಗೆ ಸೇರಿರುವ ಗೋಡಂಬಿ ತೋಟಕ್ಕೆ ಸೋಮವಾರ ಬೆಂಕಿ ತಗುಲಿ ಒಂದು ಎಕರೆ ತೋಟ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿಗಳಷ್ಟು ನಷ್ಟವಾಗಿದೆ.
ವೇಣು ಅವರು ಮೂರು ಎಕರೆಯಲ್ಲಿ ಗೋಂಡಬಿ ಬೆಳೆದಿದ್ದು, ಅದರಲ್ಲಿ ಒಂದು ಎಕರೆ ಬೆಂಕಿಗೆ ಆಹುತಿ ಆಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿತು.
ಘಟನೆ ಆಕಸ್ಮಿಕವೋ , ಕಿಡಿಗೇಡಿಗಳ ಕೃತ್ಯವೋ ಎಂಬುದು ತಿಳಿದು ಬಂದಿಲ್ಲ. ಬೇಸಿಗೆ ಆರಂಭದ ಬಳಿಕ ತಾಲ್ಲೂಕಿನ ಹಲವು ಕಡೆ ಈ ರೀತಿಯ ಅವಘಡಗಳು ನಡೆಯುತ್ತಿವೆ.