‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮಾದಿಗ ಜನಾಂಗದ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಬದಲಾಗಿಲ್ಲ. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಗೆ ಸೇರಿದವರಲ್ಲಿ ಅತ್ಯಂತ ಹೆಚ್ಚಿನ ಶೋಷಣೆಗೆ ಒಳಗಾಗಿರುವರು ಮಾದಿಗ ಜನಾಂಗದವರು. ಪರಿಶಿಷ್ಟರಿಗೆ ಕಲ್ಪಿಸಿರುವ ಮೀಸಲು ಸೌಲಭ್ಯ ಸ್ಪೃಶ್ಯ ಸಮುದಾಯಗಳ ಪಾಲಾಗುತ್ತಿದ್ದು, ನಾವು ಮುಖ್ಯ ವಾಹಿನಿಗೆ ಬರಬೇಕೆಂದರೆ ಒಳ ಮೀಸಲಾತಿ ಜಾರಿಗೆ ಬರಲೇಬೇಕು’ ಎಂದು ಆಗ್ರಹಿಸಿದರು.