ಪೂರ್ವಿಕರು ಪ್ರತಿವರ್ಷದ ಬೇಸಿಗೆ ಕಾಲದಲ್ಲಿ ಜಮೀನುಗಳಿಗೆ ಅನುಗುಣವಾಗಿ ಕೆರೆ, ಕುಂಟೆಯ ಮಣ್ಣು, ಮರಳನ್ನು ಸಾಗಿಸುತ್ತಿದ್ದರು. ಹೊಂಗೆ ಮತ್ತಿತರ ಮರಗಳ ಎಲೆಗಳ ಸುರುಗು, ಹೂಗಳನ್ನು ಸಂಗ್ರಹಿಸಿ ಜಮೀನುಗಳಿಗೆ ಹಾಕುತ್ತಿದ್ದರು. ಆ ಮೂಲಕ ಮಣ್ಣಿನ ಸಮತೋಲನ ಕಾಪಾಡಿಕೊಳ್ಳುತ್ತಿದ್ದರು. ಇಂದಿನ ರೈತರು ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.