‘ಸೇವಾ ಭದ್ರತೆ, ಸಾಮಾನ್ಯ ನಿಯಮಾವಳಿ, ಭವಿಷ್ಯ ನಿಧಿ, ಆರೋಗ್ಯ ವಿಮೆ, ಸಂಬಳ ಸಹಿತ ರಜೆಗಳು, ವಾಸಕ್ಕೆ ಮನೆ, ನಿವೃತ್ತಿ ವೇತನ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಒಗ್ಗಟ್ಟಿನ ಹೋರಾಟ ನಡೆಸಲು ನೌಕರರು ಸಿದ್ಧರಾಗಬೇಕು’ ಎಂದು ಹೇಳಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಮುನಿಯಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಪಾಪಣ್ಣ, ಶಶಿಕಲಾ, ಕದಿರಪ್ಪ, ನವೀನ್ ಹಾಜರಿದ್ದರು.