ಎಂದಿನಂತೆ ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ತೆರಳುವ ವೇಳೆ ರಸ್ತೆ ಪಕ್ಕದ ಜಮೀನಿನ ಸಮೀಪವಿದ್ದ ಬೇಲಿಯಲ್ಲಿ ಬಿದ್ದಿದ್ದ ಶವ ನೋಡಿದ್ದಾರೆ. ಗಾಬರಿಗೊಂಡು ಅವರು ಕೂಡಲೇ ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪರಿಚಿತ ಶವವನ್ನು ಬೇಲಿಯಿಂದ ಹೊರಗೆ ತೆಗೆದು ಪರಿಶೀಲಿಸಿದ್ದಾರೆ.