<p><strong>ಶಿಡ್ಲಘಟ್ಟ: </strong>ಸಾಕು ಪ್ರಾಣಿಗಳಲ್ಲಿ ಮಾತ್ರವಲ್ಲದೇ ವನ್ಯಮೃಗಗಳಲ್ಲೂ ಕಂಡುಬರುವ ‘ಗಳಲೆ ರೋಗ’ (ಗಂಟಲು ಬೇನೆ- ಪಾಸ್ಚುರೆಲ್ಲಾ ಮಲ್ಟೋಸಿಡಾ) ಬಂದಾಗ ಅಸಡ್ಡೆ ತೋರಿದರೆ ಅದು ಜಾನುವಾರು ಪ್ರಾಣಕ್ಕೂ ಕುತ್ತಾಗಬಹುದು. ಎಷ್ಟೋ ಬಾರಿ ಈ ಸಮಸ್ಯೆ ಆರಂಭ ಆಗಿರುವುದು ರೈತರಿಗೆ ತಿಳಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಿರುವ ಈ ರೋಗದ ಕುರಿತಾಗಿ ಮಾಹಿತಿ ತಿಳಿದಿರಬೇಕು ಎಂದು ವಿಜ್ಞಾನಿ ಪಿ.ಎಚ್. ರಾಮಾಂಜಿನಿ ಗೌಡ ತಿಳಿಸಿದರು.</p>.<p>ತಾಲ್ಲೂಕಿನ ಅಪ್ಪೆಗೌಡನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಚಟುವಟಿಕೆ ಅಡಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>ಈ ರೋಗ ಹರಡಿಸುವ ರೋಗಾಣು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹ ಪ್ರವೇಶಿಸುತ್ತದೆ. ಈ ರೋಗಾಣು ಪ್ರಾಣಿಯ ದೇಹದಲ್ಲಿ ಪ್ರವೇಶ ಮಾಡಿದ ನಂತರ ವಾತಾವರಣದ ವೈಪರೀತ್ಯದಿಂದ ಇದು ದೇಹವನ್ನು ಆಕ್ರಮಿಸಿಕೊಂಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುತ್ತದೆ ಎಂದರು.</p>.<p>ಸುಮಾರು ಒಂದು ನೂರು ಹಸುಗಳನ್ನು ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು. ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಹಸುಗಳನ್ನು ತಪಾಸಣೆ ಮಾಡಿಸಿದರು.</p>.<p>ಕೃಷಿ ವಿಸ್ತರಣ ಅಧಿಕಾರಿ ಡಾ.ವೈ.ಎನ್. ಶಿವಲಿಂಗಯ್ಯ, ಟಿ.ಎಂ. ಅರವಿಂದ, ದಯಾನಂದ, ಶ್ರೀರಾಮ, ಡಾ.ತಿಮ್ಮರಾಜು, ಡಾ.ಶ್ರೀನಿವಾಸ, ಡಾ.ಕೃಷ್ಣಮೂರ್ತಿ, ಡಾ.ಸುಚಿತ್ರಾ, ಡಾ.ಪೂಜಾರ ಸೂರಪ್ಪ, ಡಾ.ಆನಂದ್ ಮಾನೆಗಾರ್, ಡಾ.ಗಣೇಶಮೂರ್ತಿ, ಅಪ್ಪಾಜಿಗೌಡ, ಮುನಿರೆಡ್ಡಿ, ಎಂಪಿಸಿಎಸ್ ಮಧು, ಮುನೀಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ಸಾಕು ಪ್ರಾಣಿಗಳಲ್ಲಿ ಮಾತ್ರವಲ್ಲದೇ ವನ್ಯಮೃಗಗಳಲ್ಲೂ ಕಂಡುಬರುವ ‘ಗಳಲೆ ರೋಗ’ (ಗಂಟಲು ಬೇನೆ- ಪಾಸ್ಚುರೆಲ್ಲಾ ಮಲ್ಟೋಸಿಡಾ) ಬಂದಾಗ ಅಸಡ್ಡೆ ತೋರಿದರೆ ಅದು ಜಾನುವಾರು ಪ್ರಾಣಕ್ಕೂ ಕುತ್ತಾಗಬಹುದು. ಎಷ್ಟೋ ಬಾರಿ ಈ ಸಮಸ್ಯೆ ಆರಂಭ ಆಗಿರುವುದು ರೈತರಿಗೆ ತಿಳಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಿರುವ ಈ ರೋಗದ ಕುರಿತಾಗಿ ಮಾಹಿತಿ ತಿಳಿದಿರಬೇಕು ಎಂದು ವಿಜ್ಞಾನಿ ಪಿ.ಎಚ್. ರಾಮಾಂಜಿನಿ ಗೌಡ ತಿಳಿಸಿದರು.</p>.<p>ತಾಲ್ಲೂಕಿನ ಅಪ್ಪೆಗೌಡನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಚಟುವಟಿಕೆ ಅಡಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>ಈ ರೋಗ ಹರಡಿಸುವ ರೋಗಾಣು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹ ಪ್ರವೇಶಿಸುತ್ತದೆ. ಈ ರೋಗಾಣು ಪ್ರಾಣಿಯ ದೇಹದಲ್ಲಿ ಪ್ರವೇಶ ಮಾಡಿದ ನಂತರ ವಾತಾವರಣದ ವೈಪರೀತ್ಯದಿಂದ ಇದು ದೇಹವನ್ನು ಆಕ್ರಮಿಸಿಕೊಂಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುತ್ತದೆ ಎಂದರು.</p>.<p>ಸುಮಾರು ಒಂದು ನೂರು ಹಸುಗಳನ್ನು ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು. ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಹಸುಗಳನ್ನು ತಪಾಸಣೆ ಮಾಡಿಸಿದರು.</p>.<p>ಕೃಷಿ ವಿಸ್ತರಣ ಅಧಿಕಾರಿ ಡಾ.ವೈ.ಎನ್. ಶಿವಲಿಂಗಯ್ಯ, ಟಿ.ಎಂ. ಅರವಿಂದ, ದಯಾನಂದ, ಶ್ರೀರಾಮ, ಡಾ.ತಿಮ್ಮರಾಜು, ಡಾ.ಶ್ರೀನಿವಾಸ, ಡಾ.ಕೃಷ್ಣಮೂರ್ತಿ, ಡಾ.ಸುಚಿತ್ರಾ, ಡಾ.ಪೂಜಾರ ಸೂರಪ್ಪ, ಡಾ.ಆನಂದ್ ಮಾನೆಗಾರ್, ಡಾ.ಗಣೇಶಮೂರ್ತಿ, ಅಪ್ಪಾಜಿಗೌಡ, ಮುನಿರೆಡ್ಡಿ, ಎಂಪಿಸಿಎಸ್ ಮಧು, ಮುನೀಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>