ಯುವರೆಡ್ಕ್ರಾಸ್ ಘಟಕದ ಮುಖಂಡ ಈ.ಶ್ರೀನಿವಾಸ್ ಮಾತನಾಡಿ, ರಕ್ತ ಪಡೆಯುವುದಕ್ಕೂ ಮುನ್ನ ದಾನಿಯ ತೂಕ, ರಕ್ತದ ಒತ್ತಡ(ಬಿ.ಪಿ), ಆರೋಗ್ಯ ಸ್ಥಿತಿ ಪರೀಕ್ಷಿಸಲಾಗುವುದು. ಈ ಶಿಬಿರದಲ್ಲಿ 200 ಯೂನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆ ಇದೆ. ದಾನಿಗಳಿಂದ ಪಡೆದ ರಕ್ತವನ್ನು ರೆಡ್ಕ್ರಾಸ್ ಸಂಸ್ಥೆಯ ರಕ್ತನಿಧಿಯಲ್ಲಿ ಸಂಗ್ರಹಿಸಿಟ್ಟು ಅಗತ್ಯ ಇರುವವರಿಗೆ ವಿತರಿಸಲಾಗವುದು ಎಂದು ಅವರು ಹೇಳಿದರು.