ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕುಡ್ಲೂರು ಗೇಟಿನ ಬಳಿ ಶನಿಚಾರ ಬೆಳಿಗ್ಗೆ ಪಿಕಪ್ ವಾಹನವೊಂದು ವಿಭಜಕಕ್ಕೆ ಗುದ್ದಿದ್ದು, ವಾಹನದಲ್ಲಿದ್ದ ಶಿಕಾರಿಪುರದ ಮಹಮ್ಮದ್ ಅಲಿ(22) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಾಲಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.