ಮಳೆ ಅಭಾವ, ರೈತರನ್ನಷ್ಟೇ ಕಾಡುತ್ತಿಲ್ಲ, ಕೂಲಿ ನಂಬಿ ಬದುಕುತ್ತಿರುವ ಕೃಷಿ ಕಾರ್ಮಿಕರಿಗೂ ತೊಂದರೆ ಉಂಟು ಮಾಡಿದೆ. ಮಳೆ ಕೊರತೆಯಿಂದ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಕ್ರಿಮಿ-ಕೀಟ-ಕಳೆ ನಾಶಕ ಸಿಂಪಡಣೆಯಂತಹ ಕೃಷಿ ಕಾರ್ಯ ಸ್ಥಗಿತಗೊಂಡಿದೆ. ದಿನವೊಂದಕ್ಕೆ ₹300ರಿಂದ ₹500 ಕೂಲಿ ಪಡೆಯುತ್ತಿದ್ದ ಕೃಷಿ ಕಾರ್ಮಿಕರು, ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.