‘ಕಾಫಿತೋಟದಲ್ಲಿ ಕೆಲಸ ಮಾಡುತ್ತೇವೆ. ಹಗಲೆಲ್ಲ ಮೈಮುರಿದು ದುಡಿಯುತ್ತೇವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸುವ ಅಭ್ಯಾಸ ಗಂಡ–ಹೆಂಡತಿ ಇಬ್ಬರಿಗೂ ಇದೆ. ಲಾಕ್ಡೌನ್ ಆದಾಗಿನಿಂದ ಮದ್ಯ ಸಿಗುತ್ತಿಲ್ಲ. ಮೊದಲು ಒಂದು ವಾರ ಮದ್ಯ ಸೇವಿ
ಸದಿದ್ದರಿಂದ ನಿದ್ದೆ ಬರಲಿಲ್ಲ. ಈಗ ಮದ್ಯ ಸೇವಿಸದೆ ಇರುವುದಕ್ಕೆ ಒಗ್ಗಿ ಕೊಂಡಿದ್ದೇವೆ. ಮುಂದೆಯೂ ಸೇವಿಸ ಬಾರದು ಎಂದು ಮನಸ್ಸು ಮಾಡಿ ದ್ದೇವೆ. ಮದ್ಯ ಕುಡಿಯಲು ಯಾಕೆ ದುಡ್ಡು ಖರ್ಚು ಮಾಡಬೇಕು ಎಂದು ಈಗ ಅನಿಸಿದೆ’ ಎಂದು ಗಿರಿಶ್ರೇಣಿ ಭಾಗದ ಕಾಫಿ ತೋಟದ ಕಾರ್ಮಿಕ ಮಹಿಳೆ ರತ್ನಾ ಬಾಯಿ ಹೇಳುತ್ತಾರೆ.