‘ಹವಾಮಾನ ವೈಪರೀತ್ಯದ ನಡುವೆ ಅಡಿಕೆಗೆ ಎಲೆಚುಕ್ಕೆ ರೋಗ ಹರಡಿದ್ದು, ಫಸಲು ಹಾಗೂ ತೋಟಕ್ಕೆ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ ಹಳದಿ ಎಲೆ ರೋಗದೊಂದಿಗೆ ಎಲೆಚುಕ್ಕೆ ರೋಗವು ಇದ್ದು, ಮರಗಳು ಬೇಗ ಸಾಯುತ್ತಿವೆ. ಅಡಿಕೆ ನರ್ಸರಿಯಿಂದ ದೊಡ್ಡ ಮರಗಳಿಗೆ ರೋಗ ತಗುಲುತ್ತಿದ್ದು. ಈಗಾಗಲೇ ತೋಟಗಾರಿಕೆ ಇಲಾಖೆ ರೋಗ ನಿಯಂತ್ರಣಕ್ಕೆ ಔಷಧವನ್ನು ಶಿಫಾರಸು ಮಾಡಿದ್ದು, ಮುನ್ನೆಚ್ಚರಿಕೆ ಕ್ರಮದಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ’ ಎಂದರು.