‘2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಪ್ರಸ್ತಾವ ಸಲ್ಲಿಸಲು, ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಆದೇಶವೇ ಕಾರಣವಾಗಿದೆ. ಪ್ರಸ್ತುತ ಇದರ ಬಗ್ಗೆ ಚರ್ಚಿಸಲು ಸುಪ್ರೀಂ ಕೋರ್ಟ್ ಆದೇಶವೇ ಕಾರಣವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಚಳವಳಿಯನ್ನು ಕಟ್ಟಿ, ಚಳವಳಿಗಳ ಮೂಲಕವೇ ಜನರ ನಡುವೆಯೇ ಇದ್ದು, ಶಾಸಕರಾಗಿ ಆಯ್ಕೆಯಾಗಿರುವುದರಿಂದ ಜನರ ಬದುಕು ಉಳಿಸುವ ಬದ್ಧತೆಯಿದೆ. ಜನರ ಭಯ ನಿವಾರಿಸಲು ಮುಖಾಮುಖಿಯಾಗಿ ಸಭೆಯ ಆಯೋಜಿಸಲಾಗಿದೆ’ ಎಂದರು.