ಶಿರ್ವ: ಬಿಲ್ಲವ ಸಮಾಜದ 26 ಉಪ ಪಂಗಡಗಳನ್ನು ಸೇರಿಸಿಕೊಂಡು ನಿಗಮವನ್ನು ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಜಿಲ್ಲೆಯ ಬಿಲ್ಲವ ಸಮಾಜದ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ಬಿಲ್ಲವ ಮುಖಂಡರು ಮನವಿ ಸಲ್ಲಿಸಿದರು.
‘ಬಿಲ್ಲವ ಸಮಾಜಕ್ಕೆ ಕೋಶ ನಿರ್ಮಾಣದ ಅಗತ್ಯವಿಲ್ಲ. ಸಮಾಜಕ್ಕೆ ಕೊಡುವುದಾದರೆ 26 ಉಪ ಪಂಗಡಗಳಿಗೆ ಅನುಕೂಲವಾಗು ವಂತೆ ನಿಗಮ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.
ಕಟಪಾಡಿ ವಿಶ್ವನಾಥ ಕ್ಷೇತ್ರಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಮುಖಂಡರಾದ ಗೀತಾಂಜಲಿ ಸುವರ್ಣ ಇದ್ದರು.